Ad imageAd image
- Advertisement -  - Advertisement -  - Advertisement - 

ರೈತ ಸಂಪರ್ಕ ಕೇಂದ್ರ ಕೊಡ್ಲದಲ್ಲಿ ಅವ್ಯವಹಾರ: ಕಾಂಗ್ರೆಸ್ ಮುಖಂಡ ಮಹಿಮುದ್ ಆಕ್ರೋಶ.

Bharath Vaibhav
ರೈತ ಸಂಪರ್ಕ ಕೇಂದ್ರ ಕೊಡ್ಲದಲ್ಲಿ ಅವ್ಯವಹಾರ: ಕಾಂಗ್ರೆಸ್ ಮುಖಂಡ ಮಹಿಮುದ್ ಆಕ್ರೋಶ.
WhatsApp Group Join Now
Telegram Group Join Now

ಸೇಡಂ:- ರೈತ ಸಂಪರ್ಕ ಕೇಂದ್ರ ಕೋಡ್ಲಾ ಅವ್ಯವಹಾರ ಬಗ್ಗೆ ರೈತ ಸಂಪರ್ಕ ಕೇಂದ್ರ ಮದನಾದಿಂದ ಸೇಡಂ ವಾಯ ಹೋಗಿ ಬಂದರೆ ನಮಗೆ ಹೊಲದ ಔಷಧಿ ಏನುಕೂಡ ಸಿಗುತ್ತಿಲ್ಲ.ಮುಧೋಳ ರೈತ ಸಂಪರ್ಕ ಕೇಂದ್ರಕ್ಕೆ ಹೋದರೆ ಅಲ್ಲಿನ ಅಧಿಕಾರಿಗಳು ಕೊಡ್ಲಕ್ಕೆ ಹೋಗಳು ಹೇಳುತ್ತಾರೆ.

ಕೊಡ್ಲಾ ರೈತ ಸಂಪರ್ಕ ಕೇಂದ್ರ ಹೋಗಿ ಕೇಳಿದರೆ ಎಲ್ಲ ಮುಗಿದಿದೆ ನಾಳೆ ಬರುತ್ತದೆ ನಾಡಿದ್ದು ಬರುತ್ತದೆ ಅಂತ ಹೇಳುತ್ತಾರೆ.ಆದ ಕಾರಣ ಮದನಾ ಗ್ರಾಮದ ಮತ್ತು ಸುತ್ತ ಮುತ್ತಿನ ತಾಂಡದ ರೈತರಿಗೆ ತುಂಬಾ ತೊಂದರೆಯಾಗಿದೆ.

ರೈತ ಸಂಪರ್ಕ ಕೇಂದ್ರದವರು ಸರಕಾರದಿಂದ ಬರುತ್ತಿರುವ ಔಷಧಿಗಳು ಯಾರಿಗೆ ಕೊಡುತ್ತಿದೆ ಎಂದು ಅನುಮಾನ ಮೂಡಿ ಬರುತ್ತಿದೆ.ಇದ್ದ ರೈತರಿಗೆ ಬಿಟ್ಟು ಯಾರಿಗೆ ಕೊಡುತ್ತಿದ್ದಾರೆ ಅನ್ನೋದು ನಮಗೆ ಲಿಸ್ಟ್ ಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ಮಹಿಮುದ ಮದನಾ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳಿಗೆ ಆಗ್ರಹ ವ್ಯಕ್ತಪಡಿಸಿದರು.

ಇಂತಹ ಸಮಯದಲ್ಲಿ ರೈತರಿಗೆ ಔಷಧಿ ಕೊಡದೆ ರೈತರನ್ನು ಅಸಮಾದಾನ ಉಂಟುಮಾಡುವುದು ಸರಿ ಅಲ್ಲ ಎಂದು ಮಹಿಮುದ್ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಸಂಬಂಧಪಟ್ಟ ತಾಲೂಕ ಅಧಿಕಾರಿಗಳು ಗಮನಕೊಟ್ಟು ಕ್ರಮ ಕೈಗೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!