ವಿಜಯನಗರ :ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದ, ಡಾ, ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಪಾದಯಾತ್ರೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಿ ಗೋಣಿಬಸಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆ ಬಡ ಕೂಲಿ ಕಾರ್ಮಿಕರು ಗುಳಿ ಹೋಗಬಾರದು ಅವರ ಜೀವನ ಸುಧಾರಿಸಲು ಎಂದು ಮಹತ್ವ ಯೋಜನೆಯನ್ನು ಜಾರಿಗೊಳಿಸಿದರು.
ಆದರೆ ಬಿಜೆಪಿ ಮಹಾತ್ಮ ಗಾಂಧಿ ಹೆಸರನ್ನು ಅಳಿಸಿ ಅಪಮಾನ ಮಾಡಿದ್ದಾರೆ ಇದರಿಂದ ಬಡ ಕೂಲಿ ಕಾರ್ಮಿಕರಿಗೆ ತೊಂದರೆ ಆಗುತ್ತದೆ ಕೂಡಲೇ ವಿಬಿಜಿ ರಾಮ್ ಜಿ ಯೋಜನೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ ಹಿರೇಮಠ್ ಮಾತನಾಡಿ ಈ ಹಿಂದೆ ಉದ್ಯೋಗ ಖಾತ್ರಿ ಕೇಂದ್ರಸರ್ಕಾರ 90 ರಷ್ಟು ರಾಜ್ಯಸರ್ಕಾರ 10 ರಷ್ಟು ಹಣ ಸಂದಾಯ ಮಾಡುಬೇಕಿತ್ತು ಆದರೆ ಇದೀಗ ಬಿಜೆಪಿ ಸರ್ಕಾರ 60,-40 ಅನುಪಾತದಲ್ಲಿದೆ ಯೋಜನೆ ರೂಪಿಸಿದೆ ಇದರಿಂದ ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತದೆ ಕಾರ್ಮಿಕರ ಹಕ್ಕನ್ನು ಕಸಿದುಕೊಂಡ ಬಂಡವಾಳಶಾಹಿಗಳಿಗೆ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಯೋಜನೆ ರೂಪಿಸಿದಂತಾಗಿದೆ ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲವಾಗಿ ವಿಬಿಜಿ ರಾಮ ಜಿ ಅದರ ಉದ್ದೇಶ ಮತ್ತು ಅದನ್ನು ಸಂಪೂರ್ಣ ವಿರೋಧಿಸಿ ಪ್ರತಿಭಟನೆ ಮೂಲಕ ಅಭಿಯಾನ ಕೈಗೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆಅಧ್ಯಕ್ಷರು. ಎಂ ಮರಿರಾಮಪ್ಪನವರು ಮೋದಿಗೆ ಧಿಕ್ಕಾರಹಾಕುತ್ತಾ ಎಲ್ಲಾ ಮುಖಂಡರುಗಳಲ್ಲಿ ಪ್ರತಿಭಟನೆ ಉಮ್ಮಸು ತ್ತಂದರು ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿ ತಾಲೂಕು ಅಧ್ಯಕ್ಷ ಗುರುಬಸವರಾಜ್ ಸೊನ್ನದ್ ಜಿಲ್ಲಾ ಉಪಾಧ್ಯಕ್ಷ ಜಂದಿಸಾಬ್ ಜಿಲ್ಲಾ ಸದಸ್ಯ ಹೆಗ್ಡಾಳ ಪರಶುರಾಮ ವಿ ಎಸ್ ಎಸ್ ಎನ್ ಅಧ್ಯಕ್ಷರ ದಾದಮ್ಮನವರ ಬಸವರಾಜ್ ಪ್ರಮುಖರಾದ ನಂದಿ ಬಂಡಿ ಸೋಮಪ್ಪ ಹೆಗ್ಗಡಾಳ ರಾಮಣ್ಣ ಗೆದ್ಲುಕಟ್ಟಿ ಸೋಮನಾಥ್ ಚಿಂತ್ರಪಳ್ಳಿ ದೇವೇಂದ್ರಪ್ಪ ಗುಂಡ್ರುಹನುಮಂತಪ್ಪ ಹುಚ್ಚಪ್ಪ ಸೆರೆಗರ್. ತ್ಯಾವನಿಗಿ ಕೊಟ್ರೇಶ್ ಫೋಟೋ ವೀರೇಶಿ ಕೆ ಮಹೇಶ ಪಾಂಡು ಬಡಲಡಿಕಿ ನಾಗರಾಜ ತರಕಾರಿ ಸುಬ್ಬು ಪ್ರಭಾಕರ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ಇನ್ನಿತರು ಇದ್ದರು.
ವರದಿ: ಎಂ ಮಂಜುನಾಥ್




