Ad imageAd image

ಉಪಚುನಾವಣೆಗೆ ಯಾಸೀರ್ ಅಹ್ಮದ್ ಖಾನ್ ಪಠಾಣ್ ರವರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೇಸ್ ಕಾರ್ಯಕರ್ತರ ಬೇಡಿಕೆ

Bharath Vaibhav
WhatsApp Group Join Now
Telegram Group Join Now

ಶಿಗ್ಗಾಂವಿ:-  ಸವಣೂರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಢಾ – ಯಾಶೀರ್ ಅಹ್ಮದ್ ಖಾನ್ ಪಠಾಣ್ ಸರ್ ಗೆ ಅವಕಾಶ ನೀಡಬೇಕು.

2023 ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಮತ್ತು ಸವಣೂರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 35.978 ಮತಗಳಿಂದ ಬಸವರಾಜ ಬೊಮ್ಮಾಯಿ ರವರ ವಿರುದ್ಧ ಪರಾಜಿತಗೊಂಡಿದ್ದರು.2024 ರ ಉಪಚುನಾವಣೆಯಲ್ಲಿ ಅಶೀರ್ ಖಾನ್ ಪಠಾಣ್ ರವರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಬೇಕು.ಅವರಿಗೆ ಶಿಗ್ಗಾಂವಿ ಮತ್ತು ಸವಣೂರ ಕ್ಷೇತ್ರದಲ್ಲಿ ವಿಧಾನಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು.ಬಸವರಾಜ ಬೊಮ್ಮಾಯಿ ವಿರುದ್ಧ ಪರಾಜಿತಗೊಂಡರು ಸಹ ಆ ಕ್ಷೇತ್ರದ ಸಾರ್ವಜನಿಕರಿಗೆ ಯಾವುದೇ ಕ್ಷಣದಲ್ಲೂ ಸ್ಪಂದನೆ ನೀಡಿದ್ದಾರೆ ಎನ್ನಲಾಗಿದೆ.

ಶಿಗ್ಗಾಂವಿ ತಾಲೂಕಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಹೆಸರು ಮಾಡಿ ಜನರ ಕಷ್ಟಕ್ಕೆ ನೆರವಾಗಿದ್ದಾರೆ ಆದ್ದರಿಂದ ಈ ಸಾರಿಯ ವಿಧಾನಸಭೆ ಉಪಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಟೀಕೆಟ್ ನೀಡಬೇಕೆಂಬುವುದು ಜನರ ಕೂಗಾಗಿದೆ  2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಬೊಮ್ಮಾಯಿ ರವರು 100.016 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿಯಾದ ಡಾ ಯಾಸೀರ್ ಅಹ್ಮದ್ ಖಾನ್ ಪಠಾಣ್ ರವರು 64.038 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದರು.ಆದ್ದರಿಂದ ಈ ಬಾರಿ ಉಪಚುನಾವಣೆಯಲ್ಲಿ ಇವರಿಗೆ ಜಯಭೇರಿ ಮಾಡಬೇಕೆಂದು ಶಿಗ್ಗಾಂವಿ ತಾಲೂಕಿನ ಸಾರ್ವಜನಿಕರ ಅಭಿಪ್ರಾಯವಾಗಿದೆ

ವರದಿ:-ರಮೇಶ ತಾಳಿಕೋಟಿ

WhatsApp Group Join Now
Telegram Group Join Now
Share This Article
error: Content is protected !!