Ad imageAd image

ಹಿಂದುಗಳಲ್ಲಿ ಕುಡುಕರಿಗೊಬ್ಬ ದೇವರಿದ್ದಾನೆ : ತೆಲಂಗಾಣ ಸಿಎಂ ವಿವಾದಾತ್ಮಕ ಹೇಳಿಕೆ

Bharath Vaibhav
ಹಿಂದುಗಳಲ್ಲಿ ಕುಡುಕರಿಗೊಬ್ಬ ದೇವರಿದ್ದಾನೆ : ತೆಲಂಗಾಣ ಸಿಎಂ ವಿವಾದಾತ್ಮಕ ಹೇಳಿಕೆ
WhatsApp Group Join Now
Telegram Group Join Now

ಹೈದರಾಬಾದ್: ಹಿಂದುಗಳಲ್ಲಿ ಕುಡುಕರಿಗೊಬ್ಬ ದೇವರಿದ್ದಾನೆ. ಒಬ್ಬರು ಅವಿವಾಹಿತರಿಗಾದರೆ, ಇನ್ನೊಬ್ಬರು ಕೋಳಿ ಬಲಿ ಕೊಡಲು, ಮತ್ತೊಬ್ಬರು ಸಾರಾಯಿ ಕುಡಿಯಲು’ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಹಿಂದುಗಳಲ್ಲಿ 3 ಕೋಟಿ ದೇವರುಗಳು ಏಕಿದ್ದಾರೆ?ಹಿಂದುಗಳು ಎಷ್ಟು ದೇವರನ್ನು ನಂಬುತ್ತಾರೆ? 3 ಕೋಟಿ ದೇವರುಗಳಿವೆಯೇ? ಇಷ್ಟೊಂದು ಏಕೆ ಅಸ್ತಿತ್ವದಲ್ಲಿವೆ? ಅವಿವಾಹಿತರಿಗೆ ಒಬ್ಬ ದೇವರು ಹನುಮಾನ್. ಎರಡು ಮದುವೆಯಾಗುವವರಿಗೆ ಇನ್ನೊಬ್ಬ ದೇವರು, ಮದ್ಯಪಾನ ಮಾಡುವವರಿಗೊಬ್ಬ, ಕೋಳಿ ಬಲಿಗೆ ಒಬ್ಬ, ಬೇಳೆ ಮತ್ತು ಅನ್ನಕ್ಕೆ ಒಬ್ಬ ದೇವರಿನಿದ್ದಾನೆ. ಪ್ರತಿಯೊಂದು ಗುಂಪಿಗೂ ತನ್ನದೇ ಆದ ದೇವರಿದ್ದಾನೆ.. ಈ ರೀತಿ ವಿಭಿನ್ನ ಮನಸ್ಥಿತಿಯವರು ಇದ್ರೂ ಕಾಂಗ್ರೆಸ್ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತದೆ’ ಎಂದು ಹೇಳಿದ್ದಾರೆ.

ಇನ್ನು ಸಿಎಂ ರೇವಂತ್ ರೆಡ್ಡಿ ಹೇಳಿಕೆಯಿಂದ ಹಿಂದೂಗಳಿಗೆ ಅವಮಾನವಾಗಿದೆ. ಅವರು ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಹಾಗೂ ಬಿಆರ್‌ಎಸ್‌ ಆಗ್ರಹಿಸಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!