Ad imageAd image

ದಲಿತ ಸಂಘರ್ಷ ಸಮಿತಿ ಎರಡು ದಿನದ ಅಧ್ಯಯನ ಶಿಬಿರ

Bharath Vaibhav
ದಲಿತ ಸಂಘರ್ಷ ಸಮಿತಿ ಎರಡು ದಿನದ ಅಧ್ಯಯನ ಶಿಬಿರ
WhatsApp Group Join Now
Telegram Group Join Now

ಕುಷ್ಟಗಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಲಬುರಗಿ ವಿಭಾಗದ ವತಿಯಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡ ಎರಡು ದಿನಗಳ ಅಧ್ಯಯನ ಶಿಬಿರ ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಇಂದಿರಾ ಬಿ. ಕೃಷ್ಣಪ್ಪ ಅವರು, ಮಾನವೀಯ ಮೌಲ್ಯಗಳ ಚಿಂತನೆಯನ್ನು ಎತ್ತಿ ಹಿಡಿದು ಬಡವರು, ಶೋಷಿತರು ಹಾಗೂ ದಲಿತ ಸಮುದಾಯದ ಮೇಲೆ ನಡೆಯುವ ಅನೇಕ ದೌರ್ಜನ್ಯಗಳ ವಿರುದ್ಧ ಪ್ರಾಮಾಣಿಕವಾದ ನ್ಯಾಯವನ್ನು ಒದಗಿಸುವ ಹೋರಾಟವನ್ನು ದಲಿತ ಸಂಘರ್ಷ ಸಮಿತಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಹೋರಾಟ ಮತ್ತು ಚಳುವಳಿಗಳ ಮೂಲಕ ಸರ್ಕಾರದ ಗಮನ ಸೆಳೆದು ನ್ಯಾಯ ದೊರಕಿಸುವಲ್ಲಿ ಸಂಘಟನೆಯ ಪಾತ್ರ ಮಹತ್ವದ್ದಾಗಿದೆ ಎಂದರು

ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು ಮಾತನಾಡಿ, ಸಂಘಟನೆಯ ಗುರಿ, ಉದ್ದೇಶಗಳು ಹಾಗೂ ಹೋರಾಟದ ಹಾದಿಯಲ್ಲಿ ಸಾಗಿದ ಕಾರ್ಯಕರ್ತರ ತ್ಯಾಗ ಮತ್ತು ಬದ್ಧತೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಕಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ, ರಾಜ್ಯ ಸಮಿತಿ ಸದಸ್ಯರಾದ ನಾಗಣ್ಣ ಬಡಿಗೇರ, ಅರ್ಜುನ್ ಗೊಬ್ಬೂರ, ಪಿ. ತಾಯಪ್ಪ, ರಾಜ್ಯ ಸಂಘಟನಾ ಸಂಚಾಲಕರಾದ ಹೆಚ್. ಹುಸೇನಪ್ಪ, ರಾಮಣ್ಣ ಕಲ್ಲದೇವನಹಳ್ಳಿ, ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ರೀನಿವಾಸ್ ಖೇಳಗಿ, ಗೋಪಾಲ ರಾಂಪೂರೆ, ರಂಜಿತಾ ಜೈನೂರು ರಾಜ್ಯ ಮಹಿಳಾ ಓ,ಸಂ ಸಂಚಾಲಕರು, ಮತ್ತು ಸಂಜುಕುಮಾರ ಜವಾಳಕರ್, ಬಾಬುರಾವ ಶೇಳ್ಳಗಿ, ಹಣಮಂತ ಕುಡಹಳ್ಳಿ, ವಿಶಾಲ್ ಬೇಡಕಪಳ್ಳಿ, ಅಶೋಕ ಬೇಡಕಪಳ್ಳಿ, ಮಾರುತಿ ಹುಳಗೊಳಕರ್, ರೇವಣಸಿದ್ಧ ಬೀರನಳ್ಳಿ, ಮಲ್ಲಿಕಾರ್ಜುನ ಗವಾರ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಅಧ್ಯಯನ ಶಿಬಿರವು ಚಿಂತನೆ, ಚರ್ಚೆ ಮತ್ತು ಹೋರಾಟದ ದಿಕ್ಕುಗಳನ್ನು ಸ್ಪಷ್ಟಗೊಳಿಸುವಲ್ಲಿ ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟಕ್ಕೆ ಶಕ್ತಿಯಾಗಲಿದೆ ಎಂದು ಶಿಬಿರಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!