Ad imageAd image

ದರ್ಶನ್ ಗೂ ಕುಟುಂಬ ಇದೆ. ಅಭಿಮಾನಿಗಳಿಗೆ ನೋವಾಗುವುದು ಬೇಡ : ನಟ ಕಿಚ್ಚ ಸುದೀಪ್

Bharath Vaibhav
ದರ್ಶನ್ ಗೂ ಕುಟುಂಬ ಇದೆ. ಅಭಿಮಾನಿಗಳಿಗೆ ನೋವಾಗುವುದು ಬೇಡ : ನಟ ಕಿಚ್ಚ ಸುದೀಪ್
WhatsApp Group Join Now
Telegram Group Join Now

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಪಾಲಾಗಿರುವ ನಟ ದರ್ಶನ್ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಗೂ ಕುಟುಂಬ ಇದೆ. ಅಭಿಮಾನಿಗಳಿಗೆ ನೋವಾಗುವುದು ಬೇಡ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ನಟ ಕಿಚ್ಚ ಸುದೀಪ್, ದರ್ಶನ್ ಗೂ ಕುಟುಂಬ ಇದೆ.ಅಭಿಮಾನಿಗಳಿಗೆ ನೋವಾಗುವುದು ಬೇಡ, ನನಗೆ ದೇಶದ ಕಾನೂನು, ಸರ್ಕಾರದ ಮೇಲೆ ನಂಬಿಕೆ ಇದೆ. ಮಾಧ್ಯಮಗಳ ಮೂಲಕ ನಮಗೆ ಎಲ್ಲಾ ವಿಚಾರ ಗೊತ್ತಾಗುತ್ತಿದೆ ಎಂದರು.

ದರ್ಶನ್ ಪ್ರಕರಣದಲ್ಲಿ ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ. ಪ್ರಕರಣದ ಬಗ್ಗೆ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ ಎಂದು ತಮ್ಮ ಮಾಜಿ ಕುಚಿಕು ಗೆಳೆಯನ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!