Ad imageAd image

ಸದಾಶಿವ ನಗರದ ಸ್ಮಶಾನದ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ

Bharath Vaibhav
WhatsApp Group Join Now
Telegram Group Join Now

ಬೆಳಗಾವಿ: ಸದಾಶಿವ ನಗರದಲ್ಲಿ ಸ್ಮಶಾನದ ಸಮಸ್ಯೆಗಳ ಪರಿಹರಿಸುವಂತೆ ನೀಡಿದ ಭರವಸೆಯಂತೆ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನಿಡಲಾಗುತ್ತಿದೆ ಎಂದು ಉತ್ತರದ ಶಾಸಕ ಆಸೀಫ್ (ರಾಜು) ಸೇಠ್ ಅವರ ಪುತ್ರ ಅಮಾನ್ ಸೇಟ್ ತಿಳಸಿದರು.

ಸದಾಶಿವನಗರದ ಸ್ಮಶಾನದ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸ್ಮಶಾನದ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿತ್ತು. ಸ್ಮಶಾನದಲ್ಲಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಸಮಸ್ಯೆಗಳನ್ನು ಅರಿತು ಶೀಘ್ರದಲ್ಲೆ ಪರಿಹರಿಸುವುದಾಗದ ತಂದೆ ಭರವಸೆ ನೀಡಿದ್ದರು.

ತಂದೆ ಜನರಿಗೆ ನೀಡಿದ ಮಾತಿನಂತೆ ನಗರದ ವಿವಿಧ ಕಡೆ ಅಭಿವೃದ್ದಿ ಕಾಮಗಾರಿಗಳನ್ನು  ಪ್ರಾರಂಭಿಸಲಾಗಿದೆ. ತಂದೆಯ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳು ಮತ್ತು ಸ್ಥಳೀಯ ಕಾರ್ಪೊರೇಟರ್ ಸಹಕಾರದೊಂದಿಗೆ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಗುತ್ತಿದೆ. ನಿರ್ದಿಷ್ಟ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!