ಧಾರವಾಡ: ಧಾರವಾಡದಲ್ಲಿ 20 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊರಿಯನ್ ಗೇಮ್ ಅಡಿಕ್ಷನ್ ಗೆ ಯುವಕ ಬಲಿಯಾಗಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ,
ಧಾರವಡದ ಮಂಗಳಕಟ್ಟಿ ಪ್ಲಾಟ್ ನಲ್ಲಿ 20 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದ.ಸಾವಿಗೂ ಮುನ್ನ ನನ್ನ ಸಾಅವಿಗೆ ನಾನೇ ಕಾರಣ ಎಂದು ಡೆತ್ ನೋಒಟ್ ಕೂಡ ಬರೆದಿಟ್ಟಿದ್ದ. ವಿಕಾಸ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದ ವಿದ್ಯಾರ್ಥಿ.
ಸಾವಿನ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಆತನ ಮೊಬೈಲ್ ವಶಕ್ಕೆ ಪಡೆದಿದ್ದರು. ಪರಿಶೀಲಿಸಿದಾಗ ವಿದ್ಯಾರ್ಥಿ ಕೊರಿಯನ್ ಗೇಮ್ ಆಡುತ್ತುದ್ದ ಎಂಬುದು ಬಯಲಾಗಿದೆ. ಆನ್ ಲೈನ್ ಗೇಮ್ ಗೀಳು ವಿಕಾಸ್ ನನ್ನು ಬಲಿಪಡೆದಿದೆ.
ಪಿಯುಸಿ ಮುಗಿಸಿದ್ದ ವಿಕಾಸ್, ಮನೆಯಲ್ಲಿಯೇ ಇದ್ದನಂತೆ. ನಿರಂತರವಾಗಿ ಕೊರಿಯನ್ ಗೇಮ್ ಆಡುತ್ತಿದ್ದನಂತೆ. ಆದರೆ ಈ ಬಗ್ಗೆ ಮನೆಯಲ್ಲಿ ಗೊತ್ತಿರಲಿಲ್ಲ ಎನ್ನಲಾಗಿದೆ. ಕೊರಿಯನ್ ಗೇಮ್ ಗೆ ಅಡಿಕ್ಟ್ ಆಗಿದ್ದ ವಿಕಾಸ್ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.




