Ad imageAd image

ದುಗನೂರ ಪ್ರೌಡ ಶಾಲೆ ವಿದ್ಯಾರ್ಥಿಗಳಿಗೆ ಬಿದರ ಅರಣ್ಯ ವಲಯದಲ್ಲಿ ಎರಡು ದಿನದ ಚಿಣ್ಣರ ವನ ದರ್ಶನ ಪ್ರವಾಸ

Bharath Vaibhav
ದುಗನೂರ ಪ್ರೌಡ ಶಾಲೆ ವಿದ್ಯಾರ್ಥಿಗಳಿಗೆ ಬಿದರ ಅರಣ್ಯ ವಲಯದಲ್ಲಿ ಎರಡು ದಿನದ ಚಿಣ್ಣರ ವನ ದರ್ಶನ ಪ್ರವಾಸ
WhatsApp Group Join Now
Telegram Group Join Now

ಸೇಡಂ : ಚಿತ್ತಾಪೂರ ಪ್ರಾದೇಶಿಕ ಅರಣ್ಯ ಇಲಾಖೆಯ ವತಿಯಿಂದ ದುಗುನೂರ ಪ್ರೌಢ ಶಾಲೆ ಸೇಡಂ ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಆಚರಿಸಿದ “ಚಿಣ್ಣರ ವನದರ್ಶನ” ಕಾರ್ಯಕ್ರಮದಡಿ ಬೀದರ್ ಜಿಲ್ಲೆಯ ಜೆಎಲ್ಆರ್, ಕೃಷ್ಣಮೃಗ ಸಂರಕ್ಷಿತ ಪ್ರದೇಶ, ಟ್ರೀ ಪಾರ್ಕ್, ಸಸ್ಯ ಕ್ಷೇತ್ರಗಳಿಗೆ ಎರಡು ದಿನದ 8/12/2025 ಮತ್ತು 9/12/2025ರಂದು ಪ್ರವಾಸ ಕೈಗೊಳ್ಳಲಾಗಿತ್ತು.

ಈ ಪ್ರವಾಸದ ಮುಖ್ಯಾಂಶಗಳು:

– ಕೃಷ್ಣಮೃಗ ಸಂರಕ್ಷಿತ ಪ್ರದೇಶದಲ್ಲಿ ಕೃಷ್ಣಮೃಗ, ಜಿಂಕೆ ಪಕ್ಷಿಗಳ ವೀಕ್ಷಣೆ
– ಸಸ್ಯ ಕ್ಷೇತ್ರದಲ್ಲಿ ಸಸ್ಯಗಳ ಮಹತ್ವ, ಸಂರಕ್ಷಣೆ ಕುರಿತು ತರಬೇತಿ
– ಅರಣ್ಯ ಅಧಿಕಾರಿಗಳು ಹಾಗೂ ಶೈಲೇಂದ್ರ ಕವಡೆ ಅವರಿಂದ ಅರಣ್ಯ ಸಂರಕ್ಷಣೆಯ ಮಹತ್ವ ಕುರಿತು ಉಪನ್ಯಾಸ ಮಾಡಲಾಯಿತು ಎಂದು ಅರಣ್ಯಾಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದರು.

ಪ್ರವಾಸದ ಫಲಿತಾಂಶ:
– ಮಕ್ಕಳಿಗೆ ಅರಣ್ಯ, ವನ್ಯಜೀವಿಗಳ ಬಗ್ಗೆ ಜಾಗೃತಿ
– ಪ್ರಕೃತಿ ಸಂರಕ್ಷಣೆಯ ಮಹತ್ವ ಅರಿವು
– ಹೊಸ ಅನುಭವ, ಸ್ಮರಣೀಯ ಕ್ಷಣಗಳು ತಿಳಿದು ಬರುತ್ತವೆ ಎಂದು ಅರಣ್ಯಾಧಿಕಾರಿಗಳಾದ ವಿಜಯ್ ಕುಮಾರ್ ಪಿ ಬಡಿಗೇರ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.

ಈ ಸಂಧರ್ಭದಲ್ಲಿ ಅರಣ್ಯಾಧಿಕಾರಿಗಳಾದ ಸಿದ್ದು ಗೌಡ ಡಿ,ಆರ್,ಎಫ್ ಮತ್ತು ಭೀಮಣ್ಣಗೌಡ ಬೀಟ್ ಆಫೀಸರ್ ಹಾಗೂ ಶಾಲಾ ಮಕ್ಕಳು ಮತ್ತು ಶಿಕ್ಷಕರು ಇದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!