Ad imageAd image

ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಿ ದುರುಗೇಶ್ ಕಲ್ಮಂಗಿ ಆಗ್ರಹ

Bharath Vaibhav
ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಿ ದುರುಗೇಶ್ ಕಲ್ಮಂಗಿ ಆಗ್ರಹ
WhatsApp Group Join Now
Telegram Group Join Now

ಸಿಂಧನೂರು: ಜುಲೈ 4 ರಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಸಮಿತಿ ಸಿಂಧನೂರು ಮಾನ್ಯ ತಹಸಿಲ್ದಾರ್ ಗೆ ಮನವಿ ಪತ್ರ ಸಲ್ಲಿಸಿ ಮೊನ್ನೆ ಸಿಂಧನೂರು ತಾಲೂಕಿನ ಗುಡದಮ್ಮ ಕ್ಯಾಂಪ್ ನ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಶಾಲಾ ಯಲ್ಲಿ ಎರಡನೇ ತರಗತಿ ಓದುತ್ತಿರುವ ದಲಿತ ಸಮುದಾಯದ ಅಖಿಲ್ ಎನ್ನುವ ವಿದ್ಯಾರ್ಥಿಯು ಮನೆಯಿಂದ ಶಾಲೆಗೆ ಹೋಗಿ ಶಾಲಾ ವಾಹನ ದಿಂದ ಕೆಳಗೆ ಇಳಿಯುವ ಸಮಯದಲ್ಲಿ ಆ ವಾಹನ ಚಾಲಕ ವಿದ್ಯಾರ್ಥಿಗೆ ಕಟ್ಟಿಗೆಯಿಂದ ಮೈಯಲ್ಲ ಬಾಸುಂಡೆ ಬರುವಂತೆ ದಳಿಸಿದ್ದು ನೋಡಿದರೆ ನಿಜಕ್ಕೂ ಇದು ಉದ್ದೇಶಪೂರ್ವಕವಾದ ಕೃತ್ಯ ಎನಿಸುತ್ತದೆ

ಅಷ್ಟೇ ಅಲ್ಲದೆ ಈಗಾಗಲೇ ಆ ಶಾಲೆಯ ಆಟೊಟಗಳಲ್ಲಿ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಲಾಗುತ್ತದೆ ಎನ್ನುವ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ ಈ ಮುಂಚೆಯೇ ಸಹ ಶಾಲೆಯ ಶಿಕ್ಷಕರು ಈ ವಿದ್ಯಾರ್ಥಿಯನ್ನು ಪದೇ ಪದೇ ಹೊಡೆದಿದ್ದು ಯಾರಿಗೆ ಹೇಳಿದಂತೆ ಆ ವಿದ್ಯಾರ್ಥಿಗೆ ಬೆದರಿಕೆ ಹಾಕಲಾಗಿದೆ ಎಂದು ವಿದ್ಯಾರ್ಥಿಯ ಕುಟುಂಬಸ್ಥರು ಆರೋಪಿಸಿದ್ದರು.

ಆದ್ದರಿಂದ ಈ ಕೂಡಲೇ ತಾವುಗಳು ಆ ಶಾಲೆಯ ವಾಹನ ಚಾಲಕನ ವಿರುದ್ಧ ಸ್ವಯಂ ದೂರು ದಾಖಲಾಯಿಸಿಕೊಂಡು ಮತ್ತು ಆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಜಾತಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ದೂರು ದಾಖಲಾಹಿಸಿಕೊಂಡು ಆ ಶಾಲೆಯ ಮಾನ್ಯತೆ ರದ್ದು ಮಾಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿ ಸಿಂಧನೂರು ಈ ಮನವಿ ಪತ್ರದ ಮೂಲಕ ಒತ್ತಾಯಿಸುತ್ತದೆ.

ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕಾಧ್ಯಕ್ಷ ದುರುಗೇಶ್ ಕಲ್ಮಗಿ, ಚನ್ನಬಸವ ಯಾಪಲ ಪರ್ವಿ ಜಿಲ್ಲಾ ಉಪಾಧ್ಯಕ್ಷರು. ವೀರೇಶ್ ದಿದ್ದಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಜಂಬಣ್ಣ ಉಪ್ಪಲ ದೊಡ್ಡಿ. ಚಿಕ್ಕೋರಪ್ಪ. ಶರಣಬಸವ ಬುನ್ನಟ್ಟಿ. ರಮೇಶ್ ಬಸಾಪುರ. ಇನ್ನು ಅನೇಕರಿದ್ದರು.

ವರದಿ:ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!