ಸೇಡಂ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಿಬ್ಬನ್ ಪಲ್ಲಿ ವತಿಯಿಂದ ಇಕೋ ಕ್ಲಬ್ ಕಾರ್ಯಕ್ರಮ ಮತ್ತು ವನಭೋಜನ ಕಾರ್ಯಕ್ರಮವು ಶಿವಾರೆಡ್ಡಿ ಕೊಲ್ಲಂಪಲ್ಲಿ ಅವರ ಹೊಲದಲ್ಲಿ ತೋಟದ ವೀಕ್ಷಣೆ ಮಾಡಿ ವಿದ್ಯಾರ್ಥಿಗಳಿಗೆ ತೋಟದಲ್ಲಿ ಬೆಳೆದ ಬೆಳೆಗಳ ಬಗ್ಗೆ ಮಾಹಿತಿ ಕೊಡಲಾಯಿತು.
ಇದೇ ವೇಳೆ ಶಾಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಕೆ ಹರ್ಷವರ್ಧನ್ ರೆಡ್ಡಿ ಅವರು ಊಟದ ವ್ಯವಸ್ಥೆ ಮಾಡಿದರು. ತೋಟದಲ್ಲಿ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳ ಮುಖಾಂತರ ಪರಿಸರ ವೀಕ್ಷಣೆ ಮಾಡಿ ಆನಂದಿಸಿದರು. ಊಟದ ವ್ಯವಸ್ಥೆ ಮಾಡಿಸಿದ ಕೆ ಹರ್ಷವರ್ಧನ್ ರೆಡ್ಡಿ ಅವರಿಗೆ ಶಿಕ್ಷಕರಾದ ಅಂಬಾದಾಸ್ ಅವರು ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಅರ್ಚನಾ ರೆಡ್ಡಿ, ಸಹ ಶಿಕ್ಷಕರಾದ ಸುಜಾತಾ ಎಸ್ ಹಂಚಿನಾಳ, ಸಹ ಶಿಕ್ಷಕರಾದ ಅಂಬಾದಾಸ್, ಸಹ ಶಿಕ್ಷಕಿಯರಾದ ರಶ್ಮಿ ಎನ್, ಅತಿಥಿ ಶಿಕ್ಷಕರು ಮಾಲಾಶ್ರೀ, ಅಶ್ವಿನಿ, ಮಲ್ಲಿಕಾ, ಗ್ರಾಮದ ಮುಖಂಡರಾದ ಶಿವಾರೆಡ್ಡಿ ಕೊಲ್ಲಂಪಲ್ಲಿ, ಕಾಶಪ್ಪ, ಕೆ ಹರ್ಷವರ್ಧನ್ ರೆಡ್ಡಿ, ಭೀಮಪ್ಪ, ದೇವಪ್ಪ, ನರೇಂದ್ರ ರೆಡ್ಡಿ, ಬಂದೇಪ್ಪ, ಮೊಗುಲಪ್ಪ, ಮಲ್ಲಪ್ಪ, ಕೃಷ್ಣಾಚಾರಿ ನಾಡೇಪಲ್ಲಿ, ಶಾನು ನಾಡೇಪಲ್ಲಿ, ಮಲ್ಲಪ್ಪ ಸೇರಿದಂತೆ ಶಾಲೆಯ ಮುದ್ದು ಮಕ್ಕಳು ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್




