ಸಿಂಧನೂರು : ಅನುಗ್ರಹ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಳೇ ಬಜಾರ, ವಾರ್ಡ್ ನಂ. 6 ಕಾಟಿಬೇಸ್ ನಲ್ಲಿ ಉದ್ಘಾಟಿಸಿದ ಜ. ಮುಹಮ್ಮದ್ ಯೂಸೂಫ್ ಕನ್ನಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಪಟೇಲವಾಡಿ ರಸ್ತೆಯಲ್ಲಿರುವ ಮಸ್ಟಿದ್-ಏ-ಹುದಾ ದಲ್ಲಿ ಇದರ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರಾದ ಇಮ್ತಿಯಾಜ್ ಬೇಗ್. ಎಂಎಲ್ಸಿ ಬಸನಗೌಡ ಬಾದರ್ಲಿ. ಮಾಜಿ ಸಚಿವ ವೆಂಕಟರಾವ್ ನಾಡಗೌಡ. ಜಿ. ಮಹಮ್ಮದ್ ಕನ್ನಿ. ಜಿ. ಉಸಾಮಾ ಖಾನ್. ಜಿ ಮಹಮ್ಮದ್ ಯಾಸೂಪ್ ಕನ್ನಿ. ಬಾಬರ್ ಪಾಷಾ ವಕೀಲರು. ಜಿ. ಖಾಜಿ ಜಲಾನಿ ಭಾಷಾ. ಜಿ. ಮಹಬೂಬ್ ಮಾತನಾಡಿ ಬಡ್ಡಿ ಬಲೆಗೆ ಸಿಲುಕಿ.ಹಲವಾರು ಜೀವಗಳು, ಕುಟುಂಬಗಳು ನಾಶವಾಗಿವೆ. ಇದಕ್ಕೆ ಪರ್ಯಾಯವಾಗಿ, ಬಡ್ಡಿ ರಹಿತ ವ್ಯವಸ್ಥೆ ಆಗಬೇಕು, ಇಂದು ಉದ್ಘಾಟನೆಯಾಗಿದ್ದು ಬಡ್ಡಿ ರಹಿತ ಸಹಕಾರಿ ಸಂಘ ವಾಗಿದ್ದು , ಇದರ ಲಾಭವನ್ನು ಬೀದಿ ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಕೆಳವರ್ಗದವರಿಗೆ ಅನುಕೂಲವಾಗಲಿದೆ ಎಂದರು
ಈ ವೇಳೆ :ಮೌಲಾನಾ ಸೈಯ್ಯದ್ ಬೈಸರ್ ಖಾದ್ರಿ ಜ. ಸೈಯದ್ ಹಾರೂನ್ ಪಾಷ ಜಾಗೀರದಾರ.
ಜ.ಅಲ್ತಾಫ್ ಸಾಬ್ ಸಾಹುಕಾರ ಮುಳ್ಳೂರ. ಅನ್ವರ್ ಪಾಶಾ. ವೇದಿಕೆಯಲ್ಲಿ ಇದ್ದರು.ಕಾರ್ಯಕ್ರಮದಲ್ಲಿ ನೂರಾರು ಪುರುಷ ಮತ್ತು ಮಹಿಳೆಯರ ಇದ್ದರು. ರಾಜಹುಸೇನ್ ಕುರಾನ್ ಪಠಣ ಮಾಡಿದರು. ಸ್ವಾಗತವನ್ನು ಯಾಖೂಬ ಅಲಿ ಮಾಡಿದರು. ನಿರೂಪಣೆಯನ್ನು ಡಾ ಬಸವರಾಜ ನಾಯಕ್ ಮಾಡಿದರು.
ವರದಿ:ಬಸವರಾಜ ಬುಕ್ಕನಹಟ್ಟಿ




