Ad imageAd image

ಸಮಸ್ಯೆಗೆ ತುರ್ತು ಪರಿಹಾರ: ಕಕಮರಿ ಗ್ರಾಮಕ್ಕೆ ವಿದ್ಯುತ್, ನೀರು ಪೂರೈಕೆ

Bharath Vaibhav
ಸಮಸ್ಯೆಗೆ ತುರ್ತು ಪರಿಹಾರ: ಕಕಮರಿ ಗ್ರಾಮಕ್ಕೆ ವಿದ್ಯುತ್, ನೀರು ಪೂರೈಕೆ
WhatsApp Group Join Now
Telegram Group Join Now

ಅಥಣಿ: ಅಥಣಿ ತಾಲೂಕಿನ ಕಕಮರಿ ಗ್ರಾಮದ ನೊಂದ ಕುಟುಂಬದ ಕುರಿತು ಬಿಬಿ 5 ನ್ಯೂಸ್ ವರದಿ ಬಿತ್ತರಿಸಿತ್ತು.ವರದಿ ಬಳಿಕ ಕೇವಲ ಒಂದು ಗಂಟೆಯಲ್ಲಿ ಸಮಸ್ಯೆಗೆ ಸ್ಪಂದಿಸಿ ವಿದ್ಯುತ್ ಹಾಗೂ ನೀರು ಪೂರೈಕೆ ಮಾಡಲಾಗಿದೆ.

ಕಳೆದ ಒಂದು ವಾರಗಳಿಂದ ವಿದ್ಯುತ್ ಬೆಳಕು, ಹಾಗೂ ಕುಡಿಯಲು ನೀರಿಲ್ಲದೆ ದಲಿತ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿತ್ತು.ನೊಂದ ಮಹಿಳೆ ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೇ ಅನ್ನದ ಅಧಿಕಾರಿಗಳ ನಿರ್ಲಕ್ಷದಿಂದ ಮಹಿಳೆ ಬಿ ವಿ 5 ವಾಹಿನಿ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು ಈ ಕುರಿತು.” ನೀರಿಲ್ಲ, ಕರೆಂಟಿಲ್ಲ”ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಬಿತ್ತರಿಸಲಾಗಿತ್ತು.

ಸುದ್ದಿ ಬಳಿಕ ಕೇವಲ ಒಂದು ಗಂಟೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕರೆಂಟ್ ವೆವಸ್ಥೆ ಕಲ್ಪಿಸಿ ನೊಂದ ಕುಟುಂಬದ ಬಾಳಲ್ಲಿ ಬೆಳಕು ಮೂಡಿಸಿದ್ದಾರೆ.ಈ ಕುರಿತು ಬಿ ವಿ 5 ನ್ಯೂಸ್ ಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ.

ವರದಿ : ಅಜಯ ಕಾಂಬಳೆ 

WhatsApp Group Join Now
Telegram Group Join Now
Share This Article
error: Content is protected !!