ನಿಡಗುಂದಿ:-ಅಖಂಡ ಕರ್ನಾಟಕ ರೈತ ಸಂಘದದಿಂದ ವಿಶಿಷ್ಟವಾದ ಪ್ರತಿಭಟನೆ ಆಲಮಟ್ಟಿ ಲಾಲ್ಬಹದ್ದೂರ್ ಶಾಸ್ತ್ರಿ ಜಲಾಶಯದ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಆಣೆಕಟ್ಟಿಗೆ ನೀರು ಹರಿಸಿದನ್ನು ಖಂಡಿಸಿ ವಿಜಯಪುರದಲ್ಲಿ ಮುಖ್ಯ ಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಪ್ರತಿಕೃತಿ ಧಹಿಸಿ ಪ್ರತಿಭಟನೆ ನಡೆಸಲಾಗಿತ್ತು.
ದಿನದ ಕಾರ್ಯವಾಗಿ ಶೃದಾಂಜಲಿ ಪಿಂಡ ಪ್ರಧಾನ ಕಾರ್ಯಕ್ರಮವನ್ನು ಆಲಮಟ್ಟಿಯ ಕೃಷ್ಣಾ ನದಿ ತೀರದ ಹಿನ್ನೀರಿನಲ್ಲಿ ಶೃಧಾಂಜಲಿ ಹಾಗೂ ಪಿಂಡ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೊದಲಿಗೆ ರೈತರು ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಪುಣ್ಯ ಸ್ನಾನ ಮಾಡಿದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭಾವಚಿತ್ರಕ್ಕೆ ಕುಂಕುಮವನ್ನು ಹಚ್ಚಿ, ಮೂರು ಪಿಂಡಗಳ ಜೊತೆಗೆ ಪೂಜಾ ವಿಧಿ ವಿಧಾನವನ್ನು ನೆಡೆಯಿತು.
ಹೆಗಲ ಮೇಲೆ ನೀರಿನ ಗಡಿಗೆಯನ್ನು ಹೊತ್ತು ಮೂರು ಸುತ್ತು ಭಾವಚಿತ್ರದ ಸುತ್ತಾ ಸುತ್ತಲಾಯಿತು, ಬಾವಚಿತ್ರಕ್ಕೆ ದೀಪ ಬೆಳಗಿಸಿ ಅನ್ನದಿಂದ ತಯಾರಿಸಿದ ಪಿಂಡವನ್ನು ಇರಿಸಿ ಅದರ ಮೇಲೆ ಕರಿ ಎಳ್ಳು ಹಾಕಿ ದರ್ಬೆ ಇಟ್ಟು ಪಿಂಡ ಅರ್ಪಣೆ ಮಾಡಿ ಪೂಜೆ ಸಲ್ಲಿಸಿ ಪಿಂಡವನ್ನು ಭಾವಚಿತ್ರದೊಂದಿಗೆ ನದಿಯಲ್ಲಿ ತೇಲಿ ಬಿಡಲಾಯಿತು.
ರೈತರು ನದಿಯಲ್ಲಿಯೆ ಇಳಿದು ಪ್ರತಿಭಟನೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ ಅವಳಿ ಜಿಲ್ಲೆಯ ರೈತರ ಮೇಲೆ ಕಳ ಕಳಿ ಇಲ್ಲದ ರಾಜ್ಯ ಸರ್ಕಾರ ತೆಲಂಗಾಣ ರಾಜ್ಯಕ್ಕೆ ನಿರಂತರವಾಗಿ ನೀರು ಹರಿಸಿ ಆಲಮಟ್ಟಿ ಜಲಾಶಯದ ನೀರನ್ನು ಸಂಪೂರ್ಣ ಖಾಲಿ ಮಾಡಲು ಹೊರಟಿದೆ ತೆಲಂಗಾಣಕ್ಕೆ ನೀರು ಹರಿಸಿದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಜನ ಪ್ರತಿನಿಧಿಗಳು ಇದ್ದು ಸತ್ತಂತಿದ್ದಾರೆ ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತೆಲಂಗಾಣಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣದಿಂದಲೆ ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ಅವಳಿ ಜಿಲ್ಲೆಯ ರೈತರು ಸರ್ಕಾರದ ವಿರುದ್ಧ ಸೀಡಿದೆದ್ದು ಸರ್ಕಾರದ ವಿರುದ್ಧ ಕ್ರಾಂತಿ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ವಿಠ್ಠಲ ಬಿರಾದಾರ, ಈರಪ್ಪ ಹಂಚನಾಳ,ಸೋಮು ಬಿರಾದಾರ, ಬಾಲಪ್ಪಗೌಡ ಲಿಂಗದಳ್ಳಿ ಹಾದಿಮನಿ ಮಲ್ಲಪ್ಪ ಪಡಸಲಗಿ ಗಿರಿಮಲ್ಲಪ್ಪ ದೋಡಮನಿ ಪುತ್ರಪ್ಪ ಬೂದಗೋಳಿ ದಾವಲಸಾಬ ನದಾಫ ಹಣಮಂತ್ರಾಯ ಹಂದ್ರಾಳ ರಾಜೇಸಾಬ ವಾಲಿಕಾರ ಈರಣ್ಣ ದೇವರಗುಡಿ ಮೋತಿಲಾಲ್ ಲಮಾಣಿ ಶೆಟ್ಟೆಪ್ಪ ಲಮಾಣಿ ಸಿದ್ದನಗೌಡ ಕುಂಟೋಜಿ ಬಸನಗೌಡ ಪಾಟೀಲ ಚಂದ್ರಶೇಖರ ಪಾಟೀಲ ಹಣಮಂತ್ರಾಯ ಗುಣಕಿ ಇದ್ದರು.
ವರದಿ :-ಅಲಿ ಮಕಾನದಾರ