Ad imageAd image

ವಡ್ದೆಪಲ್ಲಿ ಗ್ರಾಮ ಶಿಕ್ಷಕರ ನೇಮಕಕ್ಕೆ ರೈತರ ಒತ್ತಾಯ

Bharath Vaibhav
ವಡ್ದೆಪಲ್ಲಿ ಗ್ರಾಮ ಶಿಕ್ಷಕರ ನೇಮಕಕ್ಕೆ ರೈತರ ಒತ್ತಾಯ
WhatsApp Group Join Now
Telegram Group Join Now

ರಾಯಚೂರು :-ತಾಲೂಕಿನ ವಡ್ಡಪಲ್ಲೆ ಗ್ರಾಮದ ಸರಕಾರಿ ಶಾಲೆಗೆ ವಿಜ್ಞಾನ ಹಿಂದಿ ಮತ್ತು ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಕ್ಷೇತ್ರ ಶೈಕ್ಷಣಿಕಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಯಾಪಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಡ್ದೆಪಲ್ಲಿ ಗ್ರಾಮದಲ್ಲಿ 1 ರಿಂದ 7 ನೇ ತರಗತಿ ನಡೆಯುತ್ತಿದ್ದು, 220 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಕೇವಲ 5 ಜನ ಶಿಕ್ಷಕರು ಮಾತ್ರ ಇದ್ದಾರೆ. ಇದರಿಂದ ಮಕ್ಕಳು ವಿದ್ಯಾಭ್ಯಾಸ ಕಲಿಕೆಯಲ್ಲಿ ತೊಂದರೆಯಗುತ್ತಿದೆ ಎಂದು ಆರೋಪಿಸಿದರು.

ಹಿಂದಿ ವಿಜ್ಞಾನ ಮತ್ತು ದೈಹಿಕ ಶಿಕ್ಷಕರ ಕೊರತೆ ಇದೆ ಎಂದು ದೂರಿದರು. ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಈ ಕೂಡಲೇ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ವಡ್ದೆಪಲ್ಲಿ ಗ್ರಾಮದಲ್ಲಿ ಮಕ್ಕಳ ಕಲಿಕೆಗೆ ತೊಂದರೆ ಆಗದಂತೆ ಕೂಡಲೇ ಶಿಕ್ಷಕರ ಕೊರತೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ನರಸಿಂಹಲು ನಾಯಕ,ಮಲ್ಲನ್ನಗೌಡ,ಕೆ. ರಂಗನಾಥ, ಸಂಗಮೇಶ ನಾಯಕ ಸೇರಿದಂತೆ ರೈತ ಮುಖಂಡರು ಉಪಸ್ಥಿರಿದ್ದರು

ವರದಿ:-ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!