Ad imageAd image

ಕಬ್ಬಿಗೆ ಎರಡನೇ ಕಂತು 500 ರೂಪಾಯಿ ಪಾವತಿಸುವಂತೆ ರೈತರ ಒತ್ತಾಯ.

Bharath Vaibhav
ಕಬ್ಬಿಗೆ ಎರಡನೇ ಕಂತು 500 ರೂಪಾಯಿ ಪಾವತಿಸುವಂತೆ ರೈತರ ಒತ್ತಾಯ.
WhatsApp Group Join Now
Telegram Group Join Now

ಚಿಕ್ಕೋಡಿ: 2024-25ನೇ ಸಾಲಿನ ಹಂಗಾಮಿನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಸಕ್ಕರೆ ಕಾರ್ಖಾನೆಗಳಿಗೆ ರೈತರು ಪೂರೈಸಿದ ಪ್ರತಿ ಟನ್ ಕಬ್ಬಿಗೆ ಎರಡನೇ ಕಂತಾಗಿ 500 ರೂ. ನೀಡುವಂತೆ ಜೈಕಿಸಾನ ರೈತರ ಸಂಘಟನೆಯ ಅಧ್ಯಕ್ಷ ರಮೇಶ ಪಾಟೀಲ ಹಾಗೂ ರೈತರು ಒತ್ತಾಯಿಸಿದರು.

ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರೈತರು ಈ ಒತ್ತಾಯ ಮಾಡಿದರು. ಗಡಿಭಾಗದ ಸಕ್ಕರೆ ಕಾರ್ಖಾನೆಗಳು 3500 ರಿಂದ 4000 ರೂ. ಟನ್ ದರ ನೀಡಬೇಕಿತ್ತು. ಆದರೆ 3000 ರಿಂದ 3100 ರೂ. ವರೆಗೆ ನೀಡಿ ರೈತರಿಗೆ ನಿರಾಸೆ ಗೊಳಿಸಲಾಗಿದೆ.

ನೆರೆಯ ಮಹಾರಾಷ್ಟ್ರದ ದಾಲ್ಡಿಯಾ ಮತ್ತು ಬಿದ್ರಿ ಸಕ್ಕರೆ ಕಾರ್ಖಾನೆಯವರು ನೀಡಿದ್ದಾರೆ. ಅದರಂತೆ ಗಡಿಭಾಗದ ಇನ್ನುಳಿದ ಸಕ್ಕರೆ ಕಾರ್ಖಾನೆಗಳು ಎರಡನೇ ಕಂತಾಗಿ 500ರೂ. ನೀಡಬೇಕು. ಇಲ್ಲವಾದಲ್ಲಿ ಬಿದಿಗಿಳಿದು ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಶೀತಲ ಬಾಗೆ ಮಾತನಾಡಿದರು. ಉಪಾಧ್ಯಕ್ಷ ಧನ್ಯಕುಮಾರ ಚೌಗುಲೆ, ಶಿವಗೌಡ ಪಾಟೀಲ, ಜಿತೇಂದ್ರ ಟಾಕಳೆ, ಸುಭಾಶ ಚೌಗುಲೆ, ಬಾಪು ಹಂಪನ್ನವರ, ಮನೋಜ ಕೋನಪ್ಪನವರ,ಸಂಜಯ ಮತ್ತು ಬಾಳಗೌಡ ಪಾಟಿಲ, ಸಂಜಯ ಮಾಳಿ, ಶೀತಲ, ಅರುಣ, ರಾಜು ಮತ್ತು ಅನೀಲ ಪಾಟೀಲ, ಹನುಮಂತ ಉಪ್ಪಾರ, ಮಲ್ಲಪ್ಪಾ ಕಂಚನಾಳೆ, ರಾಜು ಮತವಾಡೆ, ಚಂದ್ರಕಾಂತ ನಾರೆ, ಅನೀಲ ಮಡಿವಾಳೆ ಮುಂತಾದವರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!