Ad imageAd image
- Advertisement -  - Advertisement -  - Advertisement - 

ಮೂಡಾ (ಗಾಯರಾಣ ಜಾಗ) ಹಗರಣ ಕುರಿತು ಉಪವಾಸ ಸತ್ಯಾಗ್ರಹ, 27/ಆಗಸ್ಟ್ 8 ರಂದು ಪ್ರಾರಂಭ

Bharath Vaibhav
ಮೂಡಾ (ಗಾಯರಾಣ ಜಾಗ) ಹಗರಣ ಕುರಿತು ಉಪವಾಸ ಸತ್ಯಾಗ್ರಹ, 27/ಆಗಸ್ಟ್ 8 ರಂದು ಪ್ರಾರಂಭ
WhatsApp Group Join Now
Telegram Group Join Now

ಚಿಕ್ಕೋಡಿ:- ಸದಲಗಾ ಸರ್ಕಾರಿ (ಗಾಯರಾಣ ಜಾಗ) ನಡೆದಿರುವ ಭ್ರಷ್ಟಾಚಾರಕ್ಕಾಗಿ ಅನಿದೃಷ್ಟ ಕಾಲದ ಉಪವಾಸ ಸತ್ಯಾಗ್ರಹ ದಿನಾಂಕ 27 ಆಗಸ್ಟ್ 8ರಂದು ಸದುಲಗ ಪಟ್ಟಣ ಪಂಚಾಯಿತಿ ಮುಂದೆ ಹಮ್ಮಿಕೊಳ್ಳಲಾಗಿತ್ತು

ಸದಲಗಾ ಪಟ್ಟಣದ ಸಾಮಾಜಿಕ ಹೋರಾಟಗಾರರಾದ ಶ್ರೀ ಸಂಜಯ್ ಬಿ ಕಾಂಬಳೆ ಇವರ ನೇತೃತ್ವದಲ್ಲಿ ಈ ಒಂದು ಮೂಡಾ ಹಗರಣ ಭ್ರಷ್ಟಾಚಾರ ತಡೆ ಕುರಿತು ಸದಲಗಾ ಪಟ್ಟಣದ ಪಟ್ಟಣ ಪಂಚಾಯಿತಿ ಎದುರುಗಡೆ ಉಪವಾಸ ಸತ್ಯಾಗ್ರಹ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಆದರೆ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಅವರು ನನ್ನ ಮೇಲೆ ಸದಲಗಾ ಪೊಲೀಸ್ ಸ್ಟೇಷನನಲ್ಲಿ ಕಂಪ್ಲೇಟ್ ಕೊಟ್ಟು ನನ್ನನ್ನು ಉಪವಾಸ ಸತ್ಯಾಗ್ರದಿಂದ ಹಿಂಪಡೆಯಲು ರಾಜಕೀಯ ಒತ್ತಡವನ್ನು ನನ್ನ ಮೇಲೆ ಹೇರಿದರು ಎಂದು ಹೇಳಿದರು.

ಇದೆ ಒಂದು ವಿಷಯವನ್ನು ಕುರಿತು ಸಮಸ್ತ ಸದಲಗಾ ಪಟ್ಟಣದ ನಾಗರಿಕರಿಗೆ 2003 ರಿಂದ 2008ರ ವರೆಗೆ ಸದಲಗ ಪಟ್ಟಣದ ಸರ್ಕಾರಿ ಗಾಯರಾನ ಜಾಗೆಯನ್ನು ಯಾವುದೇ ಪ್ರಕಾರದ ಸರ್ಕಾರದ ಅನುಮತಿ ಪಡೆಯದೆ ಬೋಗಸ್ ಲೀಲಾವನಲ್ಲಿ ಭಾಗಿಯಾಗದೆ ಪ್ರಭಾವಿ ಶ್ರೀಮಂತರ ರನ್ನು ಪ್ರಸ್ತುತಿಯನ್ನು ಹೊರತೆಗೆಯುವ ಕುರಿತು ಈ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗಿತ್ತು.

ಇದೇ ವಿಷಯವನ್ನು ಕುರಿತು ಸಂಜಯ್ ಬಿ ಕಾಂಬಳೆ ಸಮಾಜ ಹೋರಾಟಗಾರರು ನಮ್ಮ ವಾಹಿನಿಯ ಮುoದೆ ಹೇಳಿಕೆ ನೀಡಿದ್ದಾರೆ ಬನ್ನಿ ಕೇಳೋಣ.

ಸರ್ಕಾರಿ ನೌಕರಸ್ಥರು ಬೇರೆ ಊರಿನ ನಾಗರಿಕರಿಗೆ ನಿವೇಶನ ಹಂಚಿಕೆ ಮಾಡಿ ಭ್ರಷ್ಟಾಚಾರ ಯಶಗಿರುವ ಅಂದಿನ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರೂ ಹಾಗೂ ಸಿಬ್ಬಂದಿ ತಪ್ಪಿಸ್ತರರ ಮೇಲೆ ಕಾನೂನಿನ ಅಡಿಯಲ್ಲಿ ಕ್ರಮಬೈಗೊಂಡು ಅವರ ಆಸ್ತಿಗಳನ್ನು ಮುಟ್ಟುಗೋಲ ಹಾಕಬೇಕಾಗಿ ಈ ಉಪವಾಸ ಸತ್ಯಾಗ್ರಹದ ಮುಖ್ಯ ಬೇಡಿಕೆ ಈಗ ಸದ್ಯದಲ್ಲಿ ಉಪವಾಸ ಸತ್ಯಾಗ್ರ ಕೈ ಬಿಡಲಾಗಿದೆ.

ಇದೇ ಒಂದು ಮುಖ್ಯವಾದ ಹಗರಣವನ್ನು ಕಟ್ಟು ನಿಟ್ಟಿನ ಕಾನೂನಿನ ಕ್ರಮದಲ್ಲಿ ಯಾರ್ಯಾರು ತಪ್ಪಿಸ್ಥರರನ್ನು ವಜಾ ಗೊಳಿಸಿ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಈ ಉಪವಾಸ ಸತ್ಯಾಗ್ರಹದ ಮುಖ್ಯ ಉದ್ದೇಶವಾಗಿತ್ತು.

ಈ ಹಗರಣ ಕುರಿತು ಸದಲಗಾ ಪಟ್ಟಣದ ಎಲ್ಲರೂ ಯಾವುದೇ ಜಾತಿ ಧರ್ಮ ಸೀಮಿತವಿಲ್ಲದೆ ಈ ಮೂಡಾ ಹಗರಣ ಕುರಿತು ಉಪವಾಸ ಸತ್ಯಾಗ್ರದಲ್ಲಿ ಮುಂದೆ ನಡೆಯುವ ಹೋರಾಟ ಹಾಗೂ ಸತ್ಯಾಗ್ರಹದಲ್ಲಿ ಎಲ್ಲ ನಾಗರಿಕರು ಭಾಗಿಯಾಗಬೇಕೆಂದು ವಿನಂತಿಸಲಾಗಿದೆ.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!