Ad imageAd image

ಅಕ್ರಮ ಕಲ್ಲು ಗಣಿಗಾರಿಕೆ ದಂಧೆ ವಿರುದ್ಧ ಹೋರಾಟ

Bharath Vaibhav
ಅಕ್ರಮ ಕಲ್ಲು ಗಣಿಗಾರಿಕೆ ದಂಧೆ ವಿರುದ್ಧ ಹೋರಾಟ
WhatsApp Group Join Now
Telegram Group Join Now

ಮಾನ್ವಿ ಅಕ್ರಮ ಕಲ್ಲು ಗಣಿಗಾರಿಕೆ ದಂಧೆ ವಿರುದ್ಧ ಹೋರಾಟ

ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ

ಅಕ್ರಮ ಕಲ್ಲುಗಣಿಗಾರಿಕೆಗೆ ಗಣಿ ಅಧಿಕಾರಿ ಪುಷ್ಪಲತಾ ಕಾರಣ

ದಲಿತ ಮುಖಂಡ ಗುರುರಾಜ ನಾಗಲಾಪುರ ಗಂಭೀರ ಆರೋಪ

ಎಸ್ಸಿ,ಎಸ್ಟಿ ಜನಾಂಗಕ್ಕೆ ಕಲ್ಲು ಕ್ವಾರಿ ಟೆಂಡರ್ ಕರೆಯುವಂತೆ ಆಗ್ರಹ

ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಸರ್ವೆ ನಂಬರ್ 55/1ರಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು,ಸರಕಾರಕ್ಕೆ ರಾಜಧನ ಕಟ್ಟದೆ ಮೋಸ ಮಾಡಲಾಗಿದೆ.ಹೀಗಾಗಿ ರಾಯಚೂರು ಗಣಿ ಅಧಿಕಾರಿ ಪುಷ್ಪಲತಾ ಅವರೆ ನೇರ ಹೊಣೆ ಎಂದು ಆರೋಪಿಸಿ ದಲಿತ ಮುಖಂಡ ಗುರುರಾಜ ನಾಗಲಾಪುರ ಪ್ರತಿಭಟನೆ ನಡೆಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಶಾಸಕರ ಭವನದ ಮುಂದೆ ಧರಣಿ ನಡೆಸಿ ಗಣಿ ಅಧಿಕಾರಿ ಪುಷ್ಪಲತಾ ವಿರುದ್ಧ ಧಿಕ್ಕಾರ ಕೂಗಿದರು. ನೀರಮಾನ್ವಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದು,ಅಂದಾಜು ಒಂದು ಲಕ್ಷ ಟನ್ ಹೆಚ್ಚುವರಿ ಕಲ್ಲು ಗಣಿಗಾರಿಕೆ ಮಾಡಿದ್ದು ಹಿರಿಯ ಅಧಿಕಾರಿಗಳಿಂದ ಪುನಹ ಸರ್ವೆ ಮಾಡಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

ಸರಕಾರದ ನಿಯಮದ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕಲ್ಲು ಕಟ್ಟಡ ಕ್ವಾರಿಯನ್ನು ಗುರುತಿಸಿ ಟೆಂಡರ್ ಕರೆಯಲು ಅವಕಾಶ ಇದೆ.ಆದರೆ ಗಣಿ ಅಧಿಕಾರಿ ಪುಷ್ಪಲತಾ ಅವರು ರಾಯಚೂರು ಜಿಲ್ಲೆಯಲ್ಲಿ ಇದುವರೆಗೂ ಟೆಂಡರ್ ಕರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!