Ad imageAd image

ಮೀನು ಹಿಡಿಯುವ ಸ್ಪರ್ಧೆ

Bharath Vaibhav
WhatsApp Group Join Now
Telegram Group Join Now

ಹುನಗುಂದ:- ಎಸ್ ಆರ್ ಕೆ ಫಿಶಿಂಗ ಕ್ಲಬ್ ವತಿಯಿಂದ ನಡೆದ ಎಸ್ ಆರ್ ಕೆ ಫಿಶಿಂಗ್ ಟೂರ್ನಾಮೆಂಟ್ ನಡೆಸಿದ ಮೀನು ಹಿಡಿಯುವ ಸ್ಪರ್ಧೆಗೆ*ಶಾಸಕರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು *ಚಾಲನೆ ನೀಡಿದರು

ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಕೂಡಲ ಸಂಗಮದ ನದಿ ಪಾತ್ರದಲ್ಲಿ ಎಸ್ ಆರ್ ಕೆ ಫಿಶಿಂಗ ಕ್ಲಬ್ ವತಿಯಿಂದ ನಡೆದ ಎಸ್ ಆರ್ ಕೆ ಫಿಶಿಂಗ್ ಟೂರ್ನಾಮೆಂಟ್ ನಡೆಸಿದ ಮೀನು ಹಿಡಿಯುವ ಸ್ಪರ್ಧೆಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟೇಶ ಸಾಕಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರಣಪ್ಪ ಆಮದಿಹಾಳ, ಹುನಗುಂದ ಬ್ಲಾಕ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಸೇರಿದಂತೆ ಎಸ್ ಆರ್ ಕೆ ಫಿಶಿಂಗ್ ಕ್ಲಬ್ ಅಧ್ಯಕ್ಷ ಅಬ್ಬು ಹಳ್ಳಿ ಸೇರಿದಂತೆ ಕ್ಲಬ್ ಪದಾಧಿಕಾರಿಗಳು, ಸ್ಪರ್ಧಿಗಳು ಭಾಗವಹಿಸಿದ್ದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!