Ad imageAd image

ಮಹಾಕುಂಭಮೇಳಕ್ಕೆ ಹೊರಟವರ ವಾಹನ ಅಪಘಾತ : ಬೆಳಗಾವಿಯ ನಾಲ್ವರು ಸಾವು 

Bharath Vaibhav
ಮಹಾಕುಂಭಮೇಳಕ್ಕೆ ಹೊರಟವರ ವಾಹನ ಅಪಘಾತ : ಬೆಳಗಾವಿಯ ನಾಲ್ವರು ಸಾವು 
WhatsApp Group Join Now
Telegram Group Join Now

ಮಧ್ಯಪ್ರದೇಶ : ಇಂದೋರ್‌ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳಗಾವಿ ನಾಲ್ವರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.

10 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ವಾಹನದಲ್ಲಿದ್ದ 19 ಮಂದಿ ಪ್ರಯಾಣಿಕರು ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದರು.

ಮೃತರ ಪೈಕಿ ಇಬ್ಬರು ಬೆಳಗಾವಿ ನಗರದ ಗಣೇಶಪುರದ ನೀತಾ ಮತ್ತು ಸಾಗರ ಎಂದು ತಿಳಿದುಬಂದಿದ್ದು, ಮಿಕ್ಕವರ ಗುರುತು ಪತ್ತೆಯಾಗಿಲ್ಲ.

ಗಾಯಾಳುಗಳನ್ನು ಎಜಿಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಿಕ್ಕವರ ಮಾಹಿತಿಗಾಗಿ ಸಂಸದ ಜಗದೀಶ್‌ ಶೆಟ್ಟರ್‌ ಇಂದೋರ್‌ ಆಡಳಿತದೊಡನೆ ಸಂಪರ್ಕದಲ್ಲಿದ್ದಾರೆಂದು ತಿಳಿದುಬಂದಿದೆ.

WhatsApp Group Join Now
Telegram Group Join Now
Share This Article
error: Content is protected !!