Ad imageAd image

ಜೀವನ ಸಂಗಾತಿಯಾಗುವುದಾಗಿ ನಂಬಿಸಿ ವಂಚನೆ

Bharath Vaibhav
ಜೀವನ ಸಂಗಾತಿಯಾಗುವುದಾಗಿ ನಂಬಿಸಿ ವಂಚನೆ
WhatsApp Group Join Now
Telegram Group Join Now

ಬೆಂಗಳೂರು : ಜೀವನ್ಸಾಥಿಯಲ್ಲಿ ಪರಿಚಯವಾದ ಯುವತಿಗೆ ಜೀವನಸಾಥಿಯಾಗುತ್ತೇನೆಂದು ನಂಬಿಸಿ ಯುವಕ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಶಿವಲಿಂಗೇಶ್ ವಂಚಕ. ಆರೋಪಿ ಶಿವಲಿಂಗೇಶ್ 2022 ಡಿಸೆಂಬರ್ನಲ್ಲಿ ಜೀವನ್ ಸಾಥಿ ಡಾಟ್ ಕಾಂನಲ್ಲಿ ಸಂತ್ರಸ್ಥೆಗೆ ಪರಿಚಯವಾಗಿದ್ದಾನೆ. ಬಳಿಕ, ಇಬ್ಬರು ಭೇಟಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ಮಧ್ಯೆ ತನ್ನ ತಾಯಿಗೆ ಬ್ರೈನ್ ಸಮಸ್ಯೆ ಇದೆ ಚಿಕಿತ್ಸೆ ಕೊಡಿಸಬೇಕು ಅಂತ ನಾಟಕವಾಡಿದ್ದಾನೆ. ತನ್ನ ತಾಯಿಗೆ ಚಿಕಿತ್ಸೆ ಕೊಡಿಸಬೇಕೆಂದು ಶಿವಲಿಂಗೇಶ್ಯುವತಿಯಿಂದ ಹಂತ ಹಂತವಾಗಿ 60 ಲಕ್ಷ ರೂಪಾಯಿ ಪಡೆದಿದ್ದಾನೆ.

ಬಳಿಕ, ಶಿವಲಿಂಗೇಶ್ ಮೇಲೆ ಅನುಮಾನಗೊಂಡು ಸಂತ್ರಸ್ತ ಯುವತಿ ಆತನ ಹಿನ್ನಲೆ ಪರಿಶೀಲಿಸಿದಾಗ ಇದೇ ರೀತಿಯಾಗಿ ಬೇರೆಯವರಿಂದಲೂ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಲಿಂಕ್ಡ್ ಇನ್ನಲ್ಲಿ ಆರೋಪಿ ಬಗ್ಗೆ ಹುಡುಕಿದಾಗ ಬಂಡವಾಳ ಬಯಲಾಗಿದೆ. ಆರೋಪಿ ಶಿವಲಿಂಗೇಶ್ ಕೆಸಿನೋ ಚಟಕ್ಕೆ ಬಿದಿದ್ದು, ಸಂಬಂಧ ಹಲವರಿಂದ ಹಣ ಪಡೆದು ವಂಚಿಸ್ತಿದ್ದಾನೆಂದು ಆತನ ಕುಟುಂಬಸ್ಥರೇ ಫೋಸ್ಟ್ ಹಾಕಿರುವುದು ಸಂತ್ರಸ್ತ ಯುವತಿ ಕಂಡಿದ್ದಾರೆ.

ಆರೋಪಿ ಶಿವಲಿಂಗೇಶ್ ಕೆಸಿನೋ ಚಟಕ್ಕೆ ಬಿದ್ದಿದ್ದು ಸುಳ್ಳು ಹೇಳಿ ಎಲ್ಲರಿಂದ ಹಣ ವಸೂಲಿ ಮಾಡುತ್ತಿದ್ದಾನೆ. ನನ್ನ ತಾಯಿಗೆ ಹಾರ್ಟ್ಸರ್ಜರಿ, ಬ್ರೇನ್ಸರ್ಜರಿ, ಮೆಡಿಕಲ್ಎಮರ್ಜೆನ್ಸಿ ಇದೆ. ನಾನು ಒಂದು ಭೂಮಿ ಖರೀದಿಸಿದ್ದು, ಮುಂಗಡ ಹಣ ನೀಡಬೇಕಾಗಿದೆ. ಅಲ್ಲದೇ, ನನ್ನ ಬ್ಯಾಂಕ್ ಖಾತೆ ಸಮಸ್ಯೆಯಾಗಿದ್ದು, ತುರ್ತಾಗಿ ನನ್ನ ತಾಯಿಗೆ ಹಣ ಕಳುಹಿಸಬೇಕಾಗಿದೆ ಎಂದು ಸುಳ್ಳು ಹೇಳಿ ಹಣ ಪಡೆಯುತ್ತಿದ್ದಾನೆ. ನಮ್ಮ ಕುಟುಂಬಸ್ಥರಿಂದ 20 ಲಕ್ಷ ರೂಪಾಯಿಗಿಂತಲೂ ಹೆಚ್ಚು, ಸ್ನೇಹಿತರಿಂದ 50 ಲಕ್ಷ ರೂಪಾಯಿಗಿಂತಲೂ ಅಧಿಕ ಮತ್ತು ಮೂರು ಬ್ಯಾಂಕ್ಗಳಿಂದ 30 ರಿಂದ 40 ಲಕ್ಷಕ್ಕಿಂತಲೂ ಅಧಿಕ ರೂ. ಸಾಲ ಪಡೆದಿದ್ದಾನೆ. ಹೀಗಾಗಿ, ಆರೋಪಿ ಶಿವಲಿಂಗೇಶ್ಗೆ ಯಾರೂ ಕೂಡ ಹಣ ನೀಡಬೇಡಿ ಎಂದು ಆತನ ಕುಟುಂಬಸ್ಥರು ಪೋಸ್ಟ್ಹಾಕಿದ್ದಾರೆ.

ಇನ್ನು, ಮೋಸ ಹೋದ ಸಂತ್ರಸ್ತ ಯುವತಿ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ದೂರು ನೀಡಿದರೂ ಆರೋಪಿಯನ್ನ ಬಂಧಿಸಿಲ್ಲ ಅಂತ ಯುವತಿ ಎಕ್ಸ್ನಲ್ಲಿ ಟ್ವೀಟ್ ಮಾಡಿ ಸಹಾಯ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!