ಒಡಿಶಾ : ವಿಶ್ವ ವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ. ಇಂದಿನಿಂದ ಹನ್ನೊಂದು ದಿನಗಳ ಕಾಲ ನಡೆಯುವ ಈ ಸಂಭ್ರಮದಲ್ಲಿ 15 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯದೆ.
ಮೂರು ರಥಗಳಲ್ಲಿ ಜಗನ್ನಾಥ ಸ್ವಾಮಿ, ಅವನ ಸೋದರ ಬಲಭದ್ರ ಹಾಗೂ ಸೋದರಿ ಸುಭದ್ರಾ ದೇವಿಯ ಮೂರ್ತಿಗಳನ್ನು ಇರಿಸಿ ಮೆರವಣಿಗೆ ಮಾಡಲಾಗುತ್ತದೆ.ಗುಂಡೀಚಾ ದೇಗುಲಕ್ಕೆ ತೆರಳಲಿರುವ ಈ ಮೂರು ರಥಗಳು ಅಲ್ಲಿ ಒಂದು ವಾರ ಕಳೆದು ಬಳಿಕ ಹಿಂದಿರುಗಲಿವೆ.
ಈ ವೈಭವದ ರಥಯಾತ್ರೆಗೆ ಭಾರತದ ಹಲವು ಮೂಲೆಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸಲಿದ್ದಾರೆ. ಜು. 8 ರಂದು ರಥಯಾತ್ರೆ ಮುಕ್ತಾಯವಾಗಲಿದೆ.
ರಥಯಾತ್ರೆಯ ಭದ್ರತೆಗೆ 10 ಸಾವಿರಕ್ಕೂ ಹೆಚ್ಚು ಪೊಲೀಸರು, ಸೇನೆ, ಅರೆಸೇನೆಯ ಪಡೆಯ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು,ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.




