ಸುರಪುರ: ಸ್ಥಳೀಯ ನಿವಾಸಿಗಳಾದ ಗಂಗಾಧರ್ ಹುಲ್ಕಲ್ ಇವರಿಗೆ ಈ ವರ್ಷದ ಡೋಹರ ಕಕ್ಕಯ್ಯ ಪ್ರಶಸ್ತಿ ಪ್ರಧಾನ ಪಡೆದಿದ್ದಕ್ಕಾಗಿ ಮಾದಿಗಯುವ ಮುಖಂಡರಾದ ಬಸವರಾಜ್ ಮುಷ್ಟಳ್ಳಿ ಶಿವು ಯಾರಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಚರ್ಮ ವೃತ್ತಿಯನ್ನೇ ತಮ್ಮ ಮೂಲ ಉದ್ಯೋಗವಾಗಿ ಮಾಡಿಕೊಂಡು ಸತತ ೫೦ ವರ್ಷಗಳವರೆಗೂ ತಮ್ಮ ಜೀವನವನ್ನು ಚರ್ಮ ಉದ್ಯೋಗಕ್ಕಾಗಿ ಮೀಸಲಿಟ್ಟ ಇವರ ಬದುಕು ಮತ್ತು ವೃತ್ತಿ ಸಮಾಜಕ್ಕೆ ಒಂದು ಮಾದರಿ ಎಂದರು.

ಡೋಹರ ಕಕ್ಕಯ್ಯ ಪ್ರಶಸ್ತಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪವಾಡ ಬಸವೇಶ್ವರ ಮಠದಲ್ಲಿ ಗಣ್ಯರಿಂದ ಸತ್ಕರಿಸಿ ಗೌರವವನ್ನು ಸಮರ್ಪಿಸಲಾಯಿತು ಆದ್ದರಿಂದ ಇವರ ಶ್ರಮಿಕ ಜೀವನಕ್ಕೆ ಸಂದ ಗೌರವವಾಗಿದೆ ತಾಲೂಕಿನ ಮಾದಿಗ ಸಮಾಜದ ವತಿಯಿಂದ ಹಲವು ಗಣ್ಯರು ಮತ್ತು ಮುಖಂಡರು ಪ್ರಶಸ್ತಿ ಭಾಜನರಾಗಿದ್ದಕ್ಕಾಗಿ ಇವರಿಗೆ ಅಭಿನಂದಿಸಿದ್ದಾರೆ.
ವರದಿ: ಶೇಕಪ್ಪ ಮಾದರ




