ಸೇಡಂ: ಪಟ್ಟಣದ ವಿದ್ಯಾನಗರ ಏಚ್,ಪಿ,ಎಸ್ ನಂ.೨ ವಿದ್ಯಾರ್ಥಿಗಳು ಮೈಸೂರು ನಗರದ ಚಾಮುಂಡಿ ವಿಹಾರದ ಸ್ಟೇಡಿಯಂ ನಲ್ಲಿ ದಿನಾಂಕ 1 /11/2025ರಂದು ಆಲ್ಇಂಡಿಯಾ ಶಿಟೋರಿಯೋ ಕರಾಟೆ-ಡು-ಚಾಂಪಿಯನಶಿಪ್ 2025ರ ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ಭಾಗವಹಿಸಿ ರಣರೋಚಕವಾದ ಸಾಧನೆಯನ್ನು ಮಾಡಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಜೇನ್ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾದ ಶಿಹಾನ ದಶರಥ ದುಮ್ಮನ್ಸೂರ್ ಅವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟು ಆರು ಪ್ರಶಸ್ತಿಗಳನ್ನು ಗೆದ್ದುಕೊಂಡು ಸೇಡಂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು.
ಎರಡು ಬಂಗಾರದ ಪದಕ
ಒಂದು ಬೆಳ್ಳಿಯ ಪದಕ
ಮೂರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ಶರತ್ ಕುಮಾರ್ ತಂದೆ ರಮೇಶ್ ಚಿನ್ನದ ಪದಕ.
ಜೀವನ್ ತಂದೆ ಶಂಕರ್ ಬೆಳ್ಳಿಯ ಪದಕ
ಹಾರೋ ತಂದೆ ಸಾಬಣ್ಣ ಕಂಚಿನ ಪದಕ
ಪ್ರತಿಕ ತಂದೆ ರಾಘವೇಂದ್ರ ಕಂಚಿನ ಪದಕ
ಸಾಯಿ ರಿತ್ವಿಕ್ ತಂದೆ ರಾಜಕುಮಾರ ಕಂಚಿನ ಪದಕ.
ಕೌಶಿಕ್ ತಂದೆ ಎಂಜಿ ದೀಪು ಕಂಚಿನ ಪದಕವನ್ನು ಪಡೆದುಕೊಂಡು ರಾಷ್ಟ್ರ ಮಟ್ಟದ ಕರಾಟೆ ಕ್ರೀಡಾ ಕೂಟದಲ್ಲಿ ಅಮೋಘವಾದ ಸಾಧನೆಯನ್ನು ಮಾಡಿದ್ದಾರೆ ಎಂದು ಕರಾಟೆ ಕೋಚ್ ಕಾವೇರಿ ಹಾಗೂ ಸೇನಸೈ ಸಾಬಣ್ಣ ಅಳ್ಳೊಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




