Ad imageAd image

ಸರ್ಕಾರಿ ನೌಕರರು 48 ಗಂಟೆಗೂ ಅಧಿಕ ಕಾಲ ಬಂಧನವಾದರೇ ತಂತಾನೇ ಸೇವೆಯಿಂದ ಅಮಾನತು

Bharath Vaibhav
ಸರ್ಕಾರಿ ನೌಕರರು 48 ಗಂಟೆಗೂ ಅಧಿಕ ಕಾಲ ಬಂಧನವಾದರೇ ತಂತಾನೇ ಸೇವೆಯಿಂದ ಅಮಾನತು
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು 48 ಗಂಟೆಗೂ ಅಧಿಕ ಕಾಲ ಬಂಧನಕ್ಕೊಳಗಾದರೆ ಅವರು ಸೇವೆಯಿಂದ ತಂತಾನೇ ಅಮಾನತಾಗುತ್ತಾರೆ ಎಂದು ಕರ್ನಾಟಕ ಹೈಕೋರ್ಟ್‌ ತಿಳಿಸಿದೆ

ಕರ್ನಾಟಕ ಆಡಳಿತ ನ್ಯಾಯಾಧಿಕರಣ ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮ ಮಂಚಾಯ್ತಿ ಪಿಡಿಒ ಡಿಎಂ ಪದ್ಮನಾಭ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರನೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಮತ್ತು ಸಿಎಂ ಜೋಶಿ ಅವರ ವಿಭಾಗೀಯ ಪೀಠ ಅದನ್ನು ವಜಾಗೊಳಿಸಿದೆ.

ಸರ್ಕಾರಿ ನೌಕರ ಬಂಧನಕ್ಕೆ ಒಳಗಾಗಿದ್ದ ನಂತರ ನ್ಯಾಯಾಲಯದ ಜಾಮೀನು ಪಡೆದು ಹೊರಗೆ ಬಂದ ಮೇಲೆ ನೇರ ಕಚೇರಿಗೆ ಹೋಗಬಹುದೇ ಇಲ್ಲವೇ ಎಂಬುದನ್ನು 2015ರ ಸುತ್ತೋಲೆಯ ಪ್ರಕಾರ ಸಕ್ಷಮ ಪಾಧಿಕಾರ ನಿರ್ಧರಿಸಬೇಕು.

ಅಂತಹ ಸರ್ಕಾರಿ ಅಧಿಕಾರಿಯ ಅಮಾನತು ಆದೇಶವನ್ನು ರದ್ದುಪಡಿಸಬೇಕೋ, ಇಲ್ಲವೋ ಎಂಬ ಬಗ್ಗೆಯೂ ಪ್ರಾಧಿಕಾರವೇ ಅಂತಿಮ ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದೆ.

ಕರ್ನಾಟಕ ನಾಗರಿಕ ನಿಯಮಗಳು 1957ರ ನಿಯಮ 10 (2)(ಎ) ನಿಯಮಗಳ ಪ್ರಕಾರ ಸರ್ಕಾರಿ ನೌಕರ 48 ಗಂಟೆಗೂ ಹೆಚ್ಚು ಕಾಲ ಬಂಧನದಲ್ಲಿದ್ದರೆ ಸೇವೆಯಿಂದ ತಂತಾನೇ ಅಮಾನತಾಗುತ್ತಾನೆ ಎಂದು ತಿಳಿಸಿದೆ.

WhatsApp Group Join Now
Telegram Group Join Now
Share This Article
error: Content is protected !!