Ad imageAd image

ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪಾಲ್ಕೊಂಡ ಮೇಲಿನ ಕಣಿವೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಗೆದ್ದು ಬಿಗಿದ್ದಾರೆ.

Bharath Vaibhav
ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪಾಲ್ಕೊಂಡ ಮೇಲಿನ ಕಣಿವೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಗೆದ್ದು ಬಿಗಿದ್ದಾರೆ.
WhatsApp Group Join Now
Telegram Group Join Now

ಮೊಳಕಾಲ್ಮುರು:- ಚಿತ್ರದುರ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಪಾಲ್ಕೊಂಡ ಮೇಲಿನ ಕಣಿವೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಗೆದ್ದು ಬಿಗಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಶನಿವಾರ ಬೆಳಿಗ್ಗೆ 11:30 ಕ್ಕೆ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಭಾಗಿಯಾದ ಮೊಳಕಾಲ್ಮೂರು ತಾಲೂಕಿನ ಮೇಲಿನ ಕಣಿವೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯಾ ಮಕ್ಕಳು ಹೊಸದುರ್ಗದ ಸರ್ಕಾರಿ ಶಾಲೆಯ ತಂಡವನ್ನು 9 ಅಂಕಗಳಿಂದ ಮಣಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗುಡ್ಡಗಾಡು ಪ್ರದೇಶದಿಂದ ತಾಲೂಕು ಕೇಂದ್ರದಿಂದ ದೂರ ಇರುವ ಪಂಪೆಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೇಲಿನ ಕಣಿವೆ ಕುಗ್ರಾಮದ ವಿದ್ಯಾರ್ಥಿಗಳ ಈ ಸಾಧನೆಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಬಿಇಒ ನಿರ್ಮಲಾದೇವಿ ಸಂತೆಗುಡ್ಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಎನ್ ಗೋವಿಂದ ಸ್ಥಳೀಯ ಗ್ರಾಮಸ್ಥರು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ,

ಕಬಡ್ಡಿ ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮೇಲಿನ ಕಣಿವೆ ಗ್ರಾಮಕ್ಕೆ ಕೀರ್ತಿ ತಂದ ವಿದ್ಯಾರ್ಥಿನಿಯರ ಈ ಸಾಧನೆಯು ನಮ್ಮ ಭಾಗದಲ್ಲಿ ನಿಜಕ್ಕೂ ಒಂದು ಮೈಲಿಗಲ್ಲು, ವಿದ್ಯಾರ್ಥಿಗಳ ಗೆಲುವಿಗಾಗಿ ಶಾಲೆಯ ಶಿಕ್ಷಕರು ಬಹಳಷ್ಟು ಶ್ರಮಿಸಿದ್ದರು, ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ವಿದ್ಯಾರ್ಥಿನಿಯರು ಈ ಸಾಧನೆಯು ನಮ್ಮ ಗ್ರಾಮಕ್ಕೆ ಕಳಶಪ್ರಾಯವಾಗಿದೆ ಎಂದು ಸಂತೆಗುಡ್ಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪ ಎನ್ ಗೋವಿಂದ ಹೇಳಿದರು.

ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷರಾದ ಜಿ.ಪರಮೇಶ್ವರಪ್ಪ ಹಾಗೂ ಎಸ್ ಡಿಎಂಸಿ ಸದಸ್ಯರಾದ ರಮೇಶ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶಿವಣ್ಣ,ಸಹ ಶಿಕ್ಷಕರಾದ ಗಣೇಶ ಜಿ,ತಿಪ್ಪೇರುದ್ರಪ್ಪ. ಎ ಕೆ.
ಕಬಡ್ಡಿ ಕ್ಯಾಪ್ಟನ್ ಎಂಆರ್ ಮೋನಿಕ. ಆಟಗಾರರಾದ ಸುಶ್ಮಿತಾ.ಕಲ್ಪನ.ಮಹಾಲಕ್ಷ್ಮಿ.ಪವಿತ್ರ.ಗಂಗೋತ್ರಿ
ಸೇರಿದಂತೆ ಹಲವರಿದ್ದರು.

ವರದಿ :-ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!