ಸೇಡಂ : ತಾಲೂಕಿನ ಕಿಷ್ಟಪೂರ್ ಗ್ರಾಮದಲ್ಲಿ ಸಮುದಾಯ ಭವನದಲ್ಲಿ ವಿದ್ಯುತ್ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರ ಮನವಿಯಂತೆ ನಮ್ಮ ಭಾರತ ವೈಭವ ನ್ಯೂಸ್ ನಲ್ಲಿ ವರದಿ ಆಗಿತ್ತು. ವರದಿಗೆ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಸಮುದಾಯ ಭವನದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಿ ಹಾಗೆ ಫ್ಯಾನ್ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಭಾರತ ವೈಭವ ದಿನಪತ್ರಿಕೆಯು ಪ್ರತಿದಿನ ಜನರ ಸಮಸ್ಯೆಗಳ ಕುರಿತು ವರದಿಗಳನ್ನು ಮಾಡಿ ಆದಷ್ಟು ಪ್ರಯತ್ನದಲ್ಲಿ ಸಮಸ್ಯೆಗಳು ಪರಿಹಾರ ಆಗುವಂತೆ ಮಾಡುತ್ತಿದೆ ಇಂತಹ ಪತ್ರಿಕೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಗ್ರಾಮದ ನಿವಾಸಿ ನರಸಪ್ಪ ಕೋಸ್ಕಿ ಶುಭ ಹಾರೈಸಿ ಹರ್ಷ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




