ಗುರುಮಠಕಲ್ : ತಾಲೂಕಿನ ಗುರುಮಠಕಲ್ ನಾಡ ಕಛೇರಿಯಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಶೌಚಾಲಯ ಪ್ರಥಮ ಚಿಕಿತ್ಸೆ ಮಾಹಿತಿ ಫಲಕಗಳು- ಸೂಕ್ತ ಸೇವೆಯ ವಿವರ ಇಲ್ಲದೇ ಗುರುಮಠಕಲ್ ನಾಡ ಕಛೇರಿಯ ದೊರೆಯುವ ಕೆಲವು ಪ್ರಮಾಣ ಪತ್ರಗಳು ಮಾಡಿಕೊಳ್ಳಲು ದಳ್ಳಾಳಿಗಳಿಂದ ಮಾತ್ರ ಸಾಧ್ಯವಾಗುತ್ತಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷತೆವಾಗಿದೆ ಸುತ್ತಮುತ್ತಲಿನ ಗ್ರಾಮಗಳ ಜನರು ನಿತ್ಯವೂ ಅಲೆಯುವಂತಾಗಿದೆ ಪರಸ್ಥಿತಿ ಆಗಿದೆ ಇದನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಆಗ್ರಹ ಮಾಡಿದ್ದಾರೆ ಜಯ ಕರ್ನಾಟಕ ಸಂಘಟನೆ.
ನಾಡ ಕಚೇರಿಯ ಮುಂಭಾಗದ ಯಾವುದೆ ಹಾಸನಗಳ ವ್ಯವಸ್ಥೆ ಇಲ್ಲದೆ ಸುಡು ಬಿಸಿಲಲ್ಲಿಯೇ ನಿಂತುಕೊಂಡು ಅವರವರ ಕೆಲಸಗಳನ್ನು ಮಾಡಿಕೊಳ್ಳಬೇಕು ಹಾಗೂ ಕಛೇರಿಯ ಆವರಣವು ಕಸದ ತ್ಯಾಜ್ಯ ಹಾಗೂ ಮದ್ಯದ ತ್ಯಾಜ್ಯಗಳಿಂದ ಗಬ್ಬು ನಾರುತ್ತಿದೆ ಕಸದಿಂದ ಕೂಡಿದ ವಾತಾವರಣದಲ್ಲೇ ಚಿಕ್ಕ ಮಕ್ಕಳ ಜೊತೆ ಮೂಗು ಮುಚ್ಚಿಕೊಂಡು ಕಛೇರಿ ಕೆಲಸವನ್ನು ಮಾಡಿಸಿಕೊಂಡು ಹೋಗುವ ದುಃಸ್ಥಿತಿ ಎದುರಾಗಿದೆ.

ಉದ್ಘಾಟನೆಗೊಂಡು ಹಲವು ವರ್ಷಗಳೇ ಕಳೆದರೂ ಕೆಲವು ಜಿಲ್ಲಾಧಿಕಾರಿಗಳು ಬೇಟಿ ನೀಡಿದರೂ ಕಟ್ಟಡದ ದುರಸ್ತಿ ಸುತ್ತುಗೋಡೆ ಸೂಕ್ತ ಶೌಚಾಲಯವಿಲ್ಲದ ಶುದ್ಧ ಕುಡಿಯುವ ನೀರು ಇಲ್ಲ ಸುತ್ತ ಮುತ್ತ ಗಬ್ಬು ವಾಸನೆ ಬರುತ್ತಿದೆ ಇದರಿಂದಾಗಿ ಸೊಳ್ಳೆಗಳು ಹೆಚ್ಚಿದ್ದು ಮಾರಕ ಕಾಯಿಲೆಗಳ ಭೀತಿಯು ಎದುರಾಗಿದೆ
ಸೂಕ್ತ ಭದ್ರತೆಯಿಲ್ಲದ ಕಾರಣ ಮದ್ಯಪಾನೀಯರು ಇಲ್ಲಿಯೇ ಕುಡಿದು ಬಿಸಾಡುತ್ತಿದ್ದು ಈ ಬಗ್ಗೆ ಸಂಬಂದಿಸಿದ ಇಲಾಖೆಯು ಗಮನಹರಿಸಿ ಸಾರ್ವಜನಿಕರಿಗೆ ಶುದ್ಧ ವಾತಾವರಣವನ್ನು ನಿರ್ಮಿಸಬೇಕೆಂಬುದು ಜಯ ಕರ್ನಾಟಕ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ : ರವಿ ಬುರನೋಳ್




