Ad imageAd image

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯರಿಗೆ ವರದಾನವಾದ ಕೈಮಗ್ಗ ಕೆಲಸ

Bharath Vaibhav
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯರಿಗೆ ವರದಾನವಾದ ಕೈಮಗ್ಗ ಕೆಲಸ
WhatsApp Group Join Now
Telegram Group Join Now

ಧಮತರಿ, ಛತ್ತೀಸ್​​ಗಢ: ಧಮತರಿಯ ಬಿಜನಪುರಿ ಗ್ರಾಮದ ಮಹಿಳೆಯರು ಪ್ರತಿ ವರ್ಷವೂ ಕೆಲವು ತಿಂಗಳು ಕೃಷಿಯನ್ನೇ ಅವಲಂಬಿಸಬೇಕಾಗುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಇವರಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಪಕ್ಕದ ರಾಜ್ಯ ಒಡಿಶಾದಿಂದ ಬಂದ ಬದಲಾವಣೆಯ ಗಾಳಿಯಿಂದಾಗಿ ಕೈಮಗ್ಗದ ಕ್ರಾಂತಿಯುಂಟಾಗಿದೆ. ಈ ಕೈಮಗ್ಗದ ಕ್ರಾಂತಿ ನಮ್ಮ ಬದುಕನ್ನೇ ಬದಲಿಸುತ್ತದೆ ಎಂಬುದು ಇವರಿಗೆ ಗೊತ್ತೇ ಇರಲಿಲ್ಲ.

2018 ರಲ್ಲಿ ಬಿಜನಪುರಿ ನೇಕಾರರ ಸಹಕಾರ ಸಂಘ ಲಿಮಿಟೆಡ್ ಸ್ಥಾಪನೆ ಮಾಡಲಾಯಿತು. ಕೇವಲ 24 ಕೆಲಸಗಾರರಿಂದ ಹುಟ್ಟಿಕೊಂಡಿದ್ದ ಸಂಘ ಈಗ 230 ಹೆಚ್ಚು ನೇಕಾರರನ್ನು ಹೊಂದಿದೆ. ಈ ಸಹಕಾರಿ ಸಂಘದಲ್ಲಿ ಮಹಿಳೆಯರಿಗೆ ಸಂಬಲ್ಪುರಿ ಸೀರೆಗಳನ್ನು ನೇಯ್ಗೆ ಮಾಡುವ ತರಬೇತಿ ನೀಡಿ, ಕೆಲಸಕ್ಕೆ ಅಣಿಗೊಳಿಲಾಗಿತ್ತು.

ಈ ಸೀರೆಗೆ ಭಾರಿ ಬೇಡಿಕೆ ಇರುವುದರಿಂದ ಒಡಿಶಾದ ಸಂಬಲ್ಪುರದಲ್ಲಿ ನೇಕಾರರಿಗೆ ಜೀವನೋಪಾಯದ ಮುಖ್ಯ ಸಾಧನವೂ ಆಗಿದೆ. ಹೀಗೆ ಆರಂಭವಾದ ತರಬೇತಿ ಅಲ್ಲಿನ ಮಹಿಳೆಯರಿಗೆ ಕೆಲಸ ನೀಡಿತು. ಪ್ರತಿ ಸೀರೆಗೆ ರೂ 300- ರೂ 350 ಗಳಿಸಲು ಈ ತರಬೇತಿ ಸಹಾಯ ಮಾಡಿದೆ. ಕೆಲವರು ತಿಂಗಳಿಗೆ ರೂ 10,000-ರೂ 12,000 ಆದಾಯವನ್ನೂ ಗಳಿಸುತ್ತಿದ್ದಾರೆ.

ಇಂದು ಈ ಸಂಘದಲ್ಲಿ 230 ಕುಶಲಕರ್ಮಿಗಳಿದ್ದಾರೆ. ಇದರಲ್ಲಿ 180 ಮಹಿಳೆಯರು ಸೀರೆಗಳನ್ನು ಮಾತ್ರವಲ್ಲದೇ ಶಾಲಾ ಸಮವಸ್ತ್ರಗಳು, ಆಸ್ಪತ್ರೆಯ ಬೆಡ್‌ಶೀಟ್‌ಗಳು ಮತ್ತು ಸಾಂಪ್ರದಾಯಿಕ ಬುಡಕಟ್ಟು ಬಟ್ಟೆಗಳನ್ನು ಸಹ ತಯಾರಿಸಿ, ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ.

ಸ್ವಯಂ ಉದ್ಯೋಗದ ಬಗ್ಗೆ ಸೊಸೈಟಿಯ ವ್ಯವಸ್ಥಾಪಕರ ಪ್ರತಿಕ್ರಿಯೆನಾಲ್ಕು ತಿಂಗಳು ಮಾತ್ರ ದುಡಿಯುತ್ತಿದ್ದ ಮಹಿಳೆಯರು ಈಗ ವರ್ಷವಿಡೀ ದುಡಿಯುತ್ತಿದ್ದಾರೆ. ಕೌಶಲ್ಯಾಭಿವೃದ್ಧಿ ತರಬೇತಿಯ ನಂತರ ಇವರೆಲ್ಲ 1000 ದಿಂದ 1200 ರೂವರೆಗೂ ಗಳಿಕೆ ಮಾಡುತ್ತಿದ್ದಾರೆ ಎಂದು ಸೊಸೈಟಿಯ ವ್ಯವಸ್ಥಾಪಕ ಅವಧಾರಂ ದೇವಾಂಗಣ್ಣ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!