ಸಿರುಗುಪ್ಪ : ನಗರದ ನಿಟ್ಟೂರು ನರಸಿಂಹ ಮೂರ್ತಿ ಬಯಲು ಜಾಗದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿರಾಟ್ ಹಿಂದು ಸಮ್ಮೇಳನವನ್ನು ಹಾಲ್ವಿ ಮಠದ ಶ್ರೀ ಅಭಿನವ ಮಹಾಂತ ಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಆಶೀರ್ವಚನ ನೀಡಿದ ಶ್ರೀಗಳು ಸಂಸ್ಕೃತಿ, ಸಂಸಾರ, ವಿಚಾರ, ವಿನಿಮಯ, ಸಹೋದರತ್ವ ಬಾಂಧವ್ಯಗಳನ್ನ ತಿಳಿದು ನಡೆದುಕೊಂಡು ಹೋದಾಗ ಮಾತ್ರ ನಾವು ಮನುಷ್ಯರಾಗ್ತೀವಿ ಇಲ್ಲದೆ ಹೋದಲ್ಲಿ ಪಶುಗಳಾಗ್ತೀವಿ
ಆದ್ದರಿಂದ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳಿಂದ ಜೀವನ ನಡೆಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹಾರಿಕಾ ಮಂಜುನಾಥ್ ರವರು 100 ಕೋಟಿ ಹಿಂದುಗಳಿಗೆ ಇರುವುದೊಂದೇ ದೇಶ ಅದು ನನ್ನ ಭಾರತ ದೇಶ ಆದಕಾರಣ ದೇಶದ ರಕ್ಷಣೆಗೆ ಇಲ್ಲ ದೇಶಭಕ್ತರು ಮುಂದಾಗಬೇಕು.
ನಾವು ಮತ್ತು ನಮ್ಮ ಕುಟುಂಬ ಸುರಕ್ಷಿತವಾಗಿರಲು ಗಲ್ಲಿ ಸುರಕ್ಷಿತವಾಗಿರಬೇಕು ಗಲ್ಲಿ ಸುರಕ್ಷಿತವಾಗಿರಲು ತಾಲೂಕು ಮತ್ತು ಜಿಲ್ಲೆ ಸುರಕ್ಷಿತವಾಗಿರಬೇಕು.
ಅದೇ ರೀತಿ ರಾಜ್ಯ ಮತ್ತು ರಾಷ್ಟ್ರವೂ ಸುರಕ್ಷಿತವಾಗಿರಬೇಕು. ನನ್ನ ದೇಶ ಸುರಕ್ಷಿತವಾಗಿ ಇರಬೇಕೆಂದರೆ ದೇಶದ ಆಸ್ಮಿತೆ ಮತ್ತು ಸನಾತನ ಎಂದೂ ಧರ್ಮ ಸುರಕ್ಷಿತವಾಗಿರಬೇಕೆಂದರು.
ಸಮಾಳ ನಂದಿ ಕುಣಿತ, ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರುಗು ತಂದರು. ಸಹಸ್ರಾರು ಮುಖಂಡರು, ಆರ್. ಎಸ್.ಎಸ್ ಮತ್ತು ಬಜರಂಗದಳ ಸೇರಿದಂತೆ ಇನ್ನಿತರ ಹಿಂದೂ ಪದಾಧಿಕಾರಿಗಳು, ಕಾರ್ಯಕರ್ತರು, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ : ಶ್ರೀನಿವಾಸ ನಾಯ್ಕ




