Ad imageAd image

ಹಜರತ್ ಮಹಮ್ಮದ್ ಪೈಗಂಬರ್ ರವರ ಜನ್ಮದಿನದ ಪ್ರಯುಕ್ತ ಬಝ್ಮೆ ಫಾರೂಕಿಯ ಮದ್ರೇಸಾ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.

Bharath Vaibhav
ಹಜರತ್ ಮಹಮ್ಮದ್ ಪೈಗಂಬರ್ ರವರ ಜನ್ಮದಿನದ ಪ್ರಯುಕ್ತ ಬಝ್ಮೆ ಫಾರೂಕಿಯ ಮದ್ರೇಸಾ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.
WhatsApp Group Join Now
Telegram Group Join Now

ಅರಸೀಕೆರೆ : ನಗರದ ಬಝ್ಮೆ ಫಾರೂಕಿಯಾ ಮದ್ರಸೆಯ ವತಿಯಿಂದ ಹಜರತ್ ಮಹಮ್ಮದ್ ಪೈಗಂಬರ್ ರವರ ಜನ್ಮ ದಿನದ ಅಂಗವಾಗಿ ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ರೋಗಿಗಳ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಝ್ಮೆ ಫಾರೂಕಿಯ ಕಾರ್ಯದರ್ಶಿ ಆರ್ ನಿಜಾಮುದ್ದೀನ್ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಹಮ್ಮದ್ ಪೈಗಂಬರ್ ಅವರ ಜನುಮದಿನದ ಅಂಗವಾಗಿ ನಮ್ಮ ಸಂಸ್ಥೆ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಮದರಸ ಗುರುಗಳು. ಅಧ್ಯಕ್ಷರಾದ ಯಾಸಿನ್ ಮೂಹಿಯುದ್ದಿನ್. ಖಜಾಂಚಿ ಸಮಿಉಲ್ಲಾ. ಮುಸ್ಲಿಂ ಸಮುದಾಯದ ಮುಖಂಡರಾದ ಎನ್ ಎಸ್ ಸರ್ದಾರ್, ಜಾವೀದ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ : ರಾಜು ಅರಸೀಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!