Ad imageAd image

ಎಮ್ಮೆ ಮಾರಿ ಕುಡಿದು ಬಂದ : ಆಕ್ಷೇಪಿಸಿದಕ್ಕೆ ಹೆಂಡತಿ ಕೊಂದ, ತಾನು ಆತ್ಮಹತ್ಯೆಗೆ ಶರಣಾದ

Bharath Vaibhav
WhatsApp Group Join Now
Telegram Group Join Now

ಬೆಳಗಾವಿ: ಇದ್ದ ಒಂದು ಎಮ್ಮೆಯನ್ನೂ ಮಾರಿ ಅದರಿಂದ ಬಂದ ಕಾಸನ್ನು ಕುಡಿತಕ್ಕೆ ಖರ್ಚು ಮಾಡಿದ ಗಂಡ, ಇದನ್ನು ಆಕ್ಷೇಪಿಸಿದ ಹೆಂಡತಿಯನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪುಲಗಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಅಣ್ಣಪ್ಪ ನಂದಿ, ಯಲ್ಲವ್ವ ನಂದಿ(41) ದುರಂತ ಅಂತ್ಯ ಕಂಡ ಗಂಡ ಹೆಂಡತಿ. ತನ್ನಲ್ಲಿದ್ದ ಎಮ್ಮೆಯನ್ನು‌ ಮಾರಿ ಬಂದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದ. ನಿನ್ನೆ ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಯಲ್ಲವ್ವ ನಂದಿ, ಗಂಡನ ಈ ನಡತೆಯನ್ನು ಆಕ್ಷೇಪಿಸಿದ್ದಳು.

ಇದರಿಂದ ಜಗಳ ಹುಟ್ಟಿಕೊಂಡಿದೆ. ಹೆಂಡತಿಯ ಮೇಲೆ‌ ಮೊದಲೇ ಸಂಶಯ ಪಡುತ್ತಿದ್ದ ಪಾಪಿ ಅಣ್ಣಪ್ಪ, ಹೆಂಡತಿ ಪ್ರಶ್ನೆ ಮಾಡುತ್ತಿದ್ದಂತೆ ಆಕೆಯನ್ನು ಕೊಂದು ಹಾಕಿದ್ದಾನೆ, ನಂತರ ಮನೆಗೆ ಬಂದು ಮನೆಯ ಹೊರ ಭಾಗದ ತಗಡಿನ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!