Ad imageAd image

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಮ್ಮ ಜಿಲ್ಲೆಯನ್ನು ದಾಟಿ ಹೋಗುವುದಕ್ಕೆ ಬಿಡುವುದಿಲ್ಲ ರೈತರ ಆಕ್ರೋಶ

Bharath Vaibhav
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಮ್ಮ ಜಿಲ್ಲೆಯನ್ನು ದಾಟಿ ಹೋಗುವುದಕ್ಕೆ ಬಿಡುವುದಿಲ್ಲ ರೈತರ ಆಕ್ರೋಶ
WhatsApp Group Join Now
Telegram Group Join Now

ಹುಕ್ಕೇರಿ:  ಪಟ್ಟಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮ ವಿವಾದಕ್ಕೆ ಕಾರಣವಾಗಿದೆ. ಹುಕ್ಕೇರಿ ತಾಲೂಕು ಆರೋಗ್ಯ ಇಲಾಖೆಯ ಆವರಣದಲ್ಲಿ ನಿರ್ಮಿಸಿರುವ ವಸತಿಗೃಹಗಳ ಉದ್ಘಾಟನಾ ಸಮಾರಂಭದಲ್ಲಿ ನಡೆದ ಘಟನೆಗಳು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ.

ಉದ್ಘಾಟನಾ ವೇದಿಕೆ, ಅತಿಥಿಗಳು, ಬ್ಯಾನರ್ ನಲ್ಲಿ “ಹುಕ್ಕೇರಿ ಆರೋಗ್ಯ ಇಲಾಖೆಯ ಆವರಣದಲ್ಲಿ ಹೊಸ ವಸತಿಗೃಹಗಳ ಉದ್ಘಾಟನಾ ಸಮಾರಂಭಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಜರಾಗಿದ್ದರು. ಆದರೆ ಕಾರ್ಯಕ್ರಮದ ಬ್ಯಾನರ್ ಹಾಗೂ ಕಟೌಟ್ಗಳಲ್ಲಿ ಚಿಕ್ಕೋಡಿ ಲೋಕಸಭಾ ಸಂಸದೆಯಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿಯವರ ಫೋಟೋ ಇರದಿರುವುದು ಸ್ಥಳೀಯರಲ್ಲಿ ಅಸಮಾಧಾನ ಉಂಟುಮಾಡಿದೆ.”

“ಈ ವಿಷಯದ ಬಗ್ಗೆ ಸಾರ್ವಜನಿಕರು ತೆರೆದ ಆಕ್ರೋಶ ವ್ಯಕ್ತಪಡಿಸಿದರು.”

ಇನ್ನು ರೈತರ ವಿಷಯ: ರೈತರು ಆರೋಗ್ಯ ಇಲಾಖೆಯ ಬಗ್ಗೆ ಸಮಸ್ಯೆ ಹೇಳಲು ಮುಂದಾದಾಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ ಕಾರು ನಿಲ್ಲಿಸದೆ ರೈತರ ಮೇಲೆ ಪೊಲೀಸರಿಂದ ಗುಂಡಾವರ್ತನೆ

ಕಾರ್ಯಕ್ರಮ ಮುಗಿದ ನಂತರ, ಕಾರು ಮುಂದೆ ರೈತರು ಸೇರಿರುವ ದೃಶ್ಯ “ಕಾರ್ಯಕ್ರಮದ ನಂತರ, ಸಚಿವರ ಕಾರನ್ನು ರೈತರು ಅಡ್ಡಗಟ್ಟಿದರು. ತಮ್ಮ ಸಮಸ್ಯೆಗಳನ್ನು ಕೇಳಿಸಿಕೊಳ್ಳಲು ರೈತರು ಪ್ರಯತ್ನಿಸಿದರೂ, ಪೊಲೀಸರ ಮಧ್ಯಪ್ರವೇಶದಿಂದ ಉದ್ವಿಗ್ನತೆ ಉಂಟಾಯಿತು.” “ಪೊಲೀಸರ ದಬ್ಬಾಳಿಕೆಗೆ ವಿರೋಧವಾಗಿ ರೈತರು ಹಾಗೂ ಸಾರ್ವಜನಿಕರು ಸಚಿವರ ವಿರುದ್ಧ ಘೋಷಣೆ ಕೂಗಿದರು.”

ವರದಿ: ಶಾಂತಿನಾಥ್ ಜಿ ಮಗದುಮ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!