Ad imageAd image

ಗ್ರಾಮದಲ್ಲಿ ಮಹಿಳಾ ಸಂಘಟನೆಗಳಿಂದ ಸನ್ಮಾನ.

Bharath Vaibhav
ಗ್ರಾಮದಲ್ಲಿ ಮಹಿಳಾ ಸಂಘಟನೆಗಳಿಂದ ಸನ್ಮಾನ.
WhatsApp Group Join Now
Telegram Group Join Now

ಬಾಗಲಕೋಟೆ :-ಭಾರತ ಸರಕಾರದಿಂದ ಟೆಲಿಕಾಂ ಮತ್ತು ಪ್ರಸಾರ ಸಚಿವಲಯದ ಬೆಳಗಾವಿ ವಿಭಾಗದ ಬಾಗಲಕೋಟೆ ವಿಭಾಗದ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ವೀರಣ್ಣ. ಎನ್. ಸಾತಣ್ಣವರ ನೇಮಕಕ್ಕೆ ಗ್ರಾಮದಲ್ಲಿ ಮಹಿಳಾ ಸಂಘಟನೆಗಳಿಂದ ಸನ್ಮಾನ.

ಭಾರತ ಸರಕಾರದಿಂದ ಟೆಲಿಕಾಂ ಮತ್ತು ಪ್ರಸಾರ ಸಚಿವಲಯದ ಬೆಳಗಾವಿ ವಿಭಾಗದ( ಬಾಗಲಕೋಟೆ, ಬೆಳಗಾವಿ, ವಿಜಯಪುರ) ಬಾಗಲಕೋಟೆ ವಿಭಾಗದ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಬಾದಾಮಿ ತಾಲೂಕಿನ ಸ್ವಾತಂತ್ರ ಹೋರಾಟಗಾರರ ಹಾಗೂ ಯೋಧರ ಗ್ರಾಮ ಚೊಳಚಗುಡ್ಡ ಗ್ರಾಮದ ಸಮಾಜ ಸೇವಕ ಕಾಯಕಯೋಗಿ ವೀರಣ್ಣ. ಎನ್. ಸಾತಣ್ಣವರ ನೇಮಕವಾಗಿದ್ದಾರೆ.

ಸಮಾಜ ಸೇವಕ ಶ್ರೀ ವೀರಣ್ಣ. ಎನ್ ಸಾತಣ್ಣವರ ತೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದು ಚೊಳಚಗುಡ್ಡ ಗ್ರಾಮದವರಿಗೆ ಸಂತಸ ತಂದಿದೆ. ಗ್ರಾಮದ ಮಹಿಳಾ ಸಂಘದಿಂದ ಶ್ರೀ ಕೊರೆಪ್ಪಜ್ಜನ ಸಮುದಾಯ ಭವನದಲ್ಲಿ ವೀರಣ್ಣ. ಎನ್. ಸಾತಣ್ಣವರ ದಂಪತಿಗಳಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನ ಮಾಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಚೊಳಚಗುಡ್ಡ ಗ್ರಾಮದ ಮಹಿಳಾ ಸಂಘಗಳ ಮಹಿಳೆಯರು ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವೀರಣ್ಣ. ಎನ್. ಸಾತಣ್ಣವರ ದಂಪತಿಗಳನ್ನು ಸನ್ಮಾನ ಮಾಡಿ ಗೌರವಿಸಿದರು.

ವರದಿ:- ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!