Ad imageAd image

ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡರ ಮಗನೇ ಅಲ್ಲ : ಹೆಚ್ ಡಿ ರೇವಣ್ಣ 

Bharath Vaibhav
ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡರ ಮಗನೇ ಅಲ್ಲ : ಹೆಚ್ ಡಿ ರೇವಣ್ಣ 
WhatsApp Group Join Now
Telegram Group Join Now

ಹಾಸನ: ನಾನು ಟೈಂ ಬರ್ಲಿ ಅಂತ ಕಾಯ್ತಾ ಇದ್ದೀನಿ. ಎಲ್ಲವನ್ನೂ ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಮಗನೇ ಅಲ್ಲ ಎಂಬುದಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಗುಡುಗಿದ್ದಾರೆ.

ಜಿಲ್ಲೆಯ ದ್ಯಾಪಲಾಪುರ ಗ್ರಾಮದಲ್ಲಿ ನಡೆದಂತ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಕೆಲವರು ಹೇಳುತ್ತಿದ್ದಾರೆ.ರೇವಣ್ಣ, ದೇವೇಗೌಡರದ್ದು ಮುಗೀತು ಅಂತ. ಆದರೇ ಈ ಜಿಲ್ಲೆಯ ಜನರಿಗೆ ಗೊತ್ತು, ದೇವೇಗೌಡ ಅವರ ಕೊಡುಗೆ ಏನು ಅಂತ ಎಂಬುದಾಗಿ ಹೇಳಿದರು.

ಹಾಸನದಲ್ಲಿ ರೈಲ್ವೆ ಯೋಜನೆ, ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಮಾಡಿದ್ದು ಯಾರು.? ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯ ಶಿಕ್ಷಣಕ್ಕೆ ಐದು ಸಾವಿರ ಕೋಟಿ ಕೊಟ್ಟಿದ್ರು ಎಂಬುದಾಗಿ ತಿಳಿಸಿದರು.

ಕೆಲವು ಅಧಿಕಾರಿಗಳು ರೇವಣ್ಣ ಹಾಗೂ ದೇವೇಗೌಡರದ್ದು ಮುಗೀತು ಎಂದು ತಿಳಿದುಕೊಂಡಿದ್ದಾರೆ. ಈ ಜಿಲ್ಲೆ ಲೂಟಿಕೋರರ ಕೈ ಸೇರಿದೆ. ನಾನು ಇಲ್ಲೇ ಇರ್ತೀನಿ. ಇದೆಲ್ಲ ಎಷ್ಟು ದಿನ ಇರುತ್ತೋ ಕಾದು ನೋಡೋಣ ಅಂತ ಹೇಳಿದರು.

 

WhatsApp Group Join Now
Telegram Group Join Now
Share This Article
error: Content is protected !!