Ad imageAd image
- Advertisement -  - Advertisement -  - Advertisement - 

ಸಿಎಂ ಸ್ಥಾನದ ಮೇಲೆ ನನಗೆ ಯಾವುದೇ ಆಸೆ ಇಲ್ಲ : ಆರ್‌ವಿ ದೇಶಪಾಂಡೆ ಸ್ಪಷ್ಟನೆ

Bharath Vaibhav
ಸಿಎಂ ಸ್ಥಾನದ ಮೇಲೆ ನನಗೆ ಯಾವುದೇ ಆಸೆ ಇಲ್ಲ : ಆರ್‌ವಿ ದೇಶಪಾಂಡೆ ಸ್ಪಷ್ಟನೆ
WhatsApp Group Join Now
Telegram Group Join Now

ಧಾರವಾಡ: ಸಿಎಂ ಸ್ಥಾನದ ಮೇಲೆ ನನಗೆ ಯಾವುದೇ ಆಸೆ ಇಲ್ಲ. ನಾನು ಸಿಎಂ ರೇಸ್‌ನಲ್ಲೂ ಇಲ್ಲ ಎಂದು ಸುಧಾರಣಾ ಆಯೋಗದ ಅಧ್ಯಕ್ಷ ಆರ್‌ವಿ ದೇಶಪಾಂಡೆ ಸ್ಪಷ್ಟನೆ ನೀಡಿದ್ದಾರೆ.

ಧಾರವಾಡದ ಜಿಲ್ಲಾ ಸಭಾಂಗಣದಲ್ಲಿ ಮಾತನಾಡಿದ ದೇಶಪಾಂಡೆ, ಆಸೆ ಇರುವುದು ಬೇರೆ, ದುರಾಸೆ ಮಾಡುವುದು ಬೇರೆ.ನನಗೆ ಸಿಎಂ ಸ್ಥಾನದಲ್ಲಿ ಯಾವುದೇ ಆಸೆ ಇಲ್ಲ. ಐದು ವರ್ಷಗಳ ಕಾಲವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಅವರು ಹೇಳಿಕೆ ನೀಡಿದರು.

ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಡಿಸಿಎಂ ಡಿಕೆ ಶಿವಕುಮಾರ್‌ ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಈ ವಯಸ್ಸಿನಲ್ಲಿ ನಮಗೂ ಚುರುಕಾಗಿರುವಂತೆ ಮಾಡಿದ್ದಾರೆ. ನಾಣು ಯಾವ ರೇಸ್‌ನಲ್ಲೂ ಇಲ್ಲ. ಮಾಧ್ಯಮಗಳ ರೇಸ್‌ನಲ್ಲಿ ಮಾತ್ರ ಇದ್ದೇನೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!