ರಾಮದುರ್ಗ:- ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಇಂದು ಸಂಜೆ ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ ಹಾಗೂ ಬರುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ ತಡೆದು ದಿಢೀರನೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಪಟ್ಟಣ ಸೇರಿದಂತೆ ಹಳೆ ತೋರಗಲ್ಲ, ಮಾಗನೂರ್, ಬೋಚಬಾಳ, ಹೀಗೆ ಹಲವು ಗ್ರಾಮಗಳಿಗೆ ತರಳಿ ಮುನವಳ್ಳಿಗೆ ಹೋಗು ಬಸ್ಆಗಿದೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ರಾಮದುರ್ಗದಿಂದ ಮುನವಳ್ಳಿವರಿಗೂ ತೆರಳುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಬಸ್ ಸಿಗುತ್ತಿಲ್ಲ. ಈಗೀಗ ಕೆಲವು ಬಸ್ಗಳಿಗೆ ವಿದ್ಯಾರ್ಥಿ ಸರಿಯಾಗಿ ಬಸ್ಸಿನ ಸೌಕರ್ಯಗಳು ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಬೆಳಗಿನ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ತೆರಳಬೇಕು ಆದರೆ ತಡವಾಗಿ ಬಸ್ಗಳನ್ನು ಬಿಡಲಾಗಿದೆ’ ಎಂದು ಶಾಲಾ ಕಾಲೇಜು ವಿದ್ಯಾರ್ಥಿನಿಯರೂ ಮತ್ತು ಪಾಲಕರು ಅಲವತ್ತುಕೊಂಡರು.
ಬಸ್ಗಳನ್ನು ಕಡ್ಡಾಯವಾಗಿ ಸರಿಯಾಗಿ ನಿಲ್ದಾಣದಲ್ಲಿ ನಿಲ್ಲುವಂತೆ ಮಾಡಬೇಕು’ ಎನ್ನುವುದು ವಿದ್ಯಾರ್ಥಿಗಳ ಒತ್ತಾಯಾಗಿದೆ.ಸ್ಥಳಕ್ಕೆ ಬಂದ ರಾಮದುರ್ಗ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ತಿರುಮಲೇಶ ಅವರನ್ನು ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡರು.ರಾಮದುರ್ಗ ಪಟ್ಟಣದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ವರದಿ:- ಮಂಜುನಾಥ ಕಲಾದಗಿ