ಹುಕ್ಕೇರಿ:-ಬಿ.ಸಿ. ಎ ಮತ್ತು ಬಿ.ಕಾಂ ಪದವಿ ಮಹಾವಿದ್ಯಾಲಯ ಪ್ರಾರಂಭೋತ್ಸವ ಹಾಗೂ ಕಾಲೇಜಿನ ನೂತನ ಕಟ್ಟಡ ಹಾಗೂ ವಸತಿ ಗೃಹಗಳ ಉದ್ಘಾಟನಾ ಸಮಾರಂಭ.
ಮಹಾವೀರ ಶಿಕ್ಷಣ ಸಂಸ್ಥೆಯ ಬಿ.ಸಿ. ಎ ಮತ್ತು ಬಿ. ಕಾಂ ಪದವಿ ಮಹಾವಿದ್ಯಾಲಯ ಪ್ರಾರಂಭೋತ್ಸವ ಹಾಗೂ ನೂತವಾಗಿ ನಿರ್ಮಿಸಿದ ಕಾಲೇಜು ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹ ಕಟ್ಟಡಗಳ ಉದ್ಘಾಟನಾ ಸಮಾರಂಭ ಗುರುವಾರ ದಿನಾಂಕ 24/10/2024 ರಂದು ಮುಂಜಾನೆ 10:30ಗಂಟೆಗೆ ನೆರವೇರಿಸಲಾಯಿತು.
ವಸಂತ ನೀಲಜಗಿ ಅವರು ಬಹಳಷ್ಟು ಕಷ್ಟಪಟ್ಟು ಸಂಸ್ಥೆಯನ್ನು ಬೆಳೆಸಿದ್ದಾರೆ ಇಂದಿನ ದಿನ ಹುಕ್ಕೇರಿ ತಾಲೂಕು ಗ್ರಾಮಗಳು ಹಾಗೂ ಹಲವು ಜಿಲ್ಲೆಗಳಲ್ಲಿ ಮಹಾವೀರ ಶಿಕ್ಷಣ ಸಂಸ್ಥೆ ಮತ್ತು ಹಣಕಾಸು ಸಂಸ್ಥೆ ಹಲವು ಸಂಸ್ಥೆಗಳನ್ನು ಬೆಳಲಿಕ್ಕೆ ಕಾರಣವೆಂದರೆ ವಸಂತ್ ನಿಲಜಗಿ ಅವರು ಇದೇ ರೀತಿ ಮಹಾವೀರ ಸಂಸ್ಥೆಗಳು ಬೆಳೆಲ್ಲಿ ನಮ್ಮ ಕತ್ತಿ ಕುಟುಂಬ ಸದಾ ತಮ್ಮ ಜೊತೆಯಾಗಿ ಇರುತ್ತದೆ ಎಂದು ರಮೇಶ ಅಣ್ಣಾ ಕತ್ತಿ ಅವರು ಹೇಳಿದರು.
ಹುಕ್ಕೇರಿ ಪಟ್ಟಣದ ಹೊರವಲಯದ ಮಹಾವೀರ ಶಿಕ್ಷಣ ಸಂಸ್ಥೆ ಅದ್ದೂರಿಯಾಗಿ ಉದ್ಘಾಟನಾ ಸಮಾರಂಭವನ್ನು ನೇರವರಸಲಾಯಿತು ಗಣ್ಯ ಹಾಗೂ ಮಠಾದಿಶಾರು ಭಾಗವಹಿಸಿದ್ದು ಮಾನ್ಯ ಶ್ರೀ ರಮೇಶ್. ವಿ. ಕತ್ತಿ ಮಾಜಿ ಸಂಸದರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಮಹಾವೀರ ಶಿಕ್ಷಣ ಸಂಸ್ಥೆ ಬಡ ಮತ್ತು ಮಾಧ್ಯಮ ಕುಟುಂಬಗಳಿಗೆ ಸಹಯಕವಾಗಿರುತ್ತದೆ ಎಂದು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಈ ಸಂಧರ್ಭದಲ್ಲಿ ಪ. ಪೂ.ಸ್ವಸ್ತಿ ಶ್ರೀ ಡಾ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾ ಸ್ವಾಮೀಜಿ, ಪ ಪೂ ಸ್ವಸ್ತಿ ಶ್ರೀ ಲಕ್ಷ್ಮಿ ಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ ಪೂ ಶ್ರೀ ಷ ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾ ಸ್ವಾಮೀಜಿ, ಪ ಪೂ ಸ್ವಸ್ತಿ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ ಪೂ ಸ್ವಸ್ತಿ ಶ್ರೀ ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ ಪೂ ಸ್ವಸ್ತಿ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪ ಪೂ ಶ್ರೀ ಎಚ್ ಎಂ ವೀರರಾಜಯ್ಯನವರು, ಮಾನ್ಯ ಶ್ರೀ ಅಭಯ ಬ ಪಾಟೀಲ, ಮಾನ್ಯ ಶ್ರೀ ಧನ್ಯಕುಮಾರ ಗುಂಡೆ ಮಾನ್ಯ ಶ್ರೀ ವಿನೋದ ಸು ದೊಡ್ಡಣ್ಣವರ,ಮಾನ್ಯ ಶ್ರೀ ಪದ್ಮನಾಭ ರಾ ಚೌಗಲಾ, ಮಾನ್ಯ ಶ್ರೀ ರಮೇಶ್ ವಿ ಕತ್ತಿ ಮಾನ್ಯ ಶ್ರೀ ವೀರ ಕುಮಾರ ಪಾಟೀಲ ಮಾನ್ಯ ಶ್ರೀ ಉತ್ತಮ ರಾ ಪಾಟೀಲ, ಮಾನ್ಯ ಶ್ರೀ ಡಾ ನೇಮಿನಾಥ ಮಗದುಮ್ಮ, ಶ್ರೀ ಸಂಜಯ ವಸಂತ ನೀಲಜಗಿ, ಶ್ರೀ ಪ್ರಜ್ವಲ ಮಹಾವೀರ ನೀಲಜಗಿ, ಶ್ರೀ ಬಾಹುಬಲಿ ಚಂದ್ರಕಾಂತ ಸೊಲ್ಲಾಪುರೆ, ಶ್ರೀ ರೋಹಿತ ಪದ್ಮನಾಭ ಚೌಗಲಾ ಉಪಸ್ಥಿತರಿದ್ದರು.
ವರದಿ:- ಶಿವಾಜಿ ಎನ್ ಬಾಲೆಶಗೋಳ