ನಿಪ್ಪಾಣಿ: ಜೈನ ಧರ್ಮ ಉಳಿಸಿ ಬೆಳೆಸಿ ಎಂಬ ನಿಟ್ಟಿನಲ್ಲಿ ಜೈನ ಸಮಾಜದ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ರಾಜಸ್ಥಾನ ಭಿವಡಿಯ ವರ್ಧಮಾನ ಪರಿವಾರ ಸೇವಾ ಟ್ರಸ್ಟ್ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದು ವೀರಶೈವದಳ ಮಧ್ಯವರ್ತಿ ಸಮಿತಿಯ ಸದಸ್ಯ ವೃಷಭ ಬಾಳಿಕಾಯಿ ತಿಳಿಸಿದರು.
ನಿಪ್ಪಾಣಿ ತಾಲೂಕಿನ ಧರ್ಮನಗರ ಭೋಜ ಗ್ರಾಮದಲ್ಲಿ ವರ್ಧಮಾನ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಮಹಿಳೆಯರ ಸಬಲೀಕರಣಕ್ಕಾಗಿ ಆಯೋಜಿಸಿದ್ದ ಹೊಲಿಗೆ ಯಂತ್ರಗಳ ವಿತರಣೆ ಹಾಗೂ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ವೃಷಭ ಮಾತನಾಡಿದರು.
ಪ್ರಾರಂಭದಲ್ಲಿ ರಾಜಸ್ಥಾನದ ವರ್ಧಮಾನ ಪರಿವಾರ ಸೇವಾ ಟ್ರಸ್ಟ್ ಪ್ರಮುಖ ಅಶೋಕ್ ಜೈನ್ ಹಾಗೂ ಆಶಾ ಜೈನ್ ಅವರ ಹಸ್ತದಿಂದ ದೀಪ ಪ್ರಜ್ವಲನೆ ಹಾಗೂ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಅಶೋಕ ಜೈನ ಆಶಾ ಜೈನ ಮಹೇಶ್ ಬಾಳಿಕಾಯಿ ಮಾತನಾಡಿದರು. ಅರ್ಚನಾ ಉಪಾಧ್ಯೆ ತರಬೇತಿಯ ಕುರಿತು ಮಹಿಳೆಯರಿಗೆ ಮಾಹಿತಿ ನೀಡಿದರು.
ತರಬೇತಿ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ದತ್ತ ಕಾರ್ಖಾನೆಯ ನಿರ್ದೇಶಕ ಅಪ್ಪಾಸಾಹೇಬ ಪಾಟೀಲ ಅತಿಶಯ ಕ್ಷೇತ್ರ ಸ್ತವನಿಧಿ ಕಮಿಟಿ ಅಧ್ಯಕ್ಷರಾದ ತಾತ್ಯಾಸಾಹೇಬ ಪಾಟೀಲ ಪ್ರವೀಣ ಪಾಟೀಲ ರಾಹುಲ್ ಚೌಗುಲೆ ಸೀತಲ ಬಾಗೆ ಅಮಿತ್ ಮೂರಾಬಟ್ಟೆ ಸೇರಿದಂತೆ ಸಮಸ್ತ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ.




