ಮುದಗಲ್ಲ ಪುರಸಭೆ ಇಂದ ಮಡಿವಾಳ ಮಾಚಿದೇವ ಜಯಂತಿ ಆಚರಣೆ..
ಮುದಗಲ್ಲ :-ಪುರಸಭೆ ಇಂದ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಮಾಡಲಾಯಿತು ನಂತರ ಮಡಿವಾಳ ಮಾಚಿದೇವ ಅವರ ಭಾವಚಿತ್ರ ಕ್ಕೆ ಮಡಿವಾಳ ಸಮಾಜದ ಬಸವರಾಜ ಮಡಿವಾಳ ಅವರು ಪೂಜೆ ಸಲ್ಲಿಸಿದ್ದರು.

ನಂತರ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಅವರು ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು, 12ನೇ ಶತಮಾನದ ಕಾಲದಲ್ಲಿ. ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.
ಮಡಿವಾಳ ಮಾಚಿದೇವರು ಬದುಕಿನ ಸಾತ್ವಿಕತೆ ನೀಡಿ ಸತ್ಯ, ಶುದ್ಧ ಕಾಯಕ ಕೊಟ್ಟವರಾಗಿದ್ದಾರೆ. ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ನರಸರಡ್ಡಿ , ಸಿಬ್ಬಂದಿ ಗಳಾದ ಚನ್ನಮ್ಮ ದಳವಾಯಿ ಹಿರೇಮಠ, ನಿಸಾರ್ ಅಹಮದ್.ಜಿಲಾನಿ ಪಾಶ , ಮಡಿವಾಳ ಸಮಾಜದ ಅಮರೇಶ ಮಡಿವಾಳರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಫೆಡರೇಷನ್(ರಿ)ಮಡಿವಾಳ , ಶರಣಪ್ಪ ಮಡಿವಾಳ ,ಲಿಂಗಪ್ಪ ಮಡಿವಾಳ ,ಆನಂದ ಮಡಿವಾಳ ಇತರರು ಉಪಸ್ಥಿತರಿದ್ದರು..
ವರದಿ:ಮಂಜುನಾಥ ಕುಂಬಾರ




