ಲಕ್ನೋ: ದೇವದತ್ತ ಪೆಡಿಕಲ್ ನಾಯಕತ್ವದ ರ್ನಾಟಕ ಕ್ರಿಕೆಟ್ ತಂಡವು ಇಂದಿಲ್ಲಿ ಆರಂಭವಾದ ಉತ್ತರಾಖಂಡ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮೊದಲ ಸೆಮಿಫೈನಲ್ ನಲ್ಲಿ ಉತ್ತಮ ಆರಂಭ ಮಾಡಿದೆ.
ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಮೊದಲ ದಿನ ಭೋಜನ ವಿರಾಮದ ವೇಳೆಗೆ ರ್ನಾಟಕ ತಂಡವು ೧ ವಿಕೆಟ್ ನಷ್ಟಕ್ಕೆ ೧೩೩ ರನ್ ಗಳಿಸಿದ್ದು, ಉತ್ತಮ ಆರಂಭ ಕಂಡಿದೆ.
ಉಭಯ ತಂಡದ ಆಟಗಾರರು ಭೋಜನ ತೆರಳಿದಾಗ ನಾಯಕ ದೇವದತ್ತ ಪಡೆಕಲ್ ೫೦ ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಕೆ.ಎಲ್. ರಾಹುಲ್ ೫೭ ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಇದಕ್ಕೆ ಮುನ್ನ ಟಾಸ್ ಗೆದ್ದ ಉತ್ತರಾಖಂಡ ತಂಡ ಮೊದಲು ಪಿಡ್ಲಿಂಗ್ ಮಾಡಲು ನರ್ಧರಿಸಿತು.
ಸ್ಕೋರ್ ವಿವರ
ರ್ನಾಟಕ ಮೊದಲ ಇನ್ನಿಂಗ್ಸ್ ೧ ವಿಕೆಟ್ಗೆ ೧೩೩
ದೇವದತ್ತ ಪೆಡಿಕಲ್ ಬ್ಯಾಟಿಂಗ್ ೫೦ ( ೬೫ ಎಸೆತ, ೪ ಬೌಂಡರಿ, ೧ ಸಿಕ್ಸರ್)
ಕೆ.ಎಲ್. ರಾಹುಲ್ ಬ್ಯಾಟಿಂಗ್ ೫೭ ( ೯೮ ಎಸೆತ, ೬ ಬೌಂಡರಿ, ೧ ಸಿಕ್ಸರ್)
ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್: ರಾಜ್ಯ ತಂಡದ ಉತ್ತಮ ಆರಂಭ




