ಸಿಂಧನೂರು : ಯುಗಾದಿ ಉತ್ಸವ ಆಚರಣೆ ಸಮಿತಿ ಸಿಂಧನೂರು ವತಿಯಿಂದ ವಿವೇರ ಗ್ರಾಂಡ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ 22 ಮಾರ್ಚ್ 2026 ರವಿವಾರ ಸಂಜೆ 5:00ಯಿಂದ ಶ್ರೀ ಪರಾಭವ ನಾಮ ಸಂವತ್ಸರ ಯುಗಾದಿ ಹಬ್ಬದ ಪ್ರಯುಕ್ತ ಸತ್ಯ ಗಾರ್ಡನ್ ನಲ್ಲಿ ಸಂಸ್ಕೃತಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಸಂಜೆ 5:00 ಗಂಟೆಯಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಇಬ್ಬರು ಮಹನೀಯರಿಗೆ “ಕಲ್ಯಾಣ ಕರ್ನಾಟಕ ಕಣ್ಮಣಿ” ಎನ್ನುವ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಗುವುದು ಈ ಸಮಾರಂಭದಲ್ಲಿ ನಗರ ಮತ್ತು ತಾಲೂಕಿನ ಎಲ್ಲಾ ನಾಗರಿಕ ಬಂಧುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ವೈ. ನರೇಂದ್ರನಾಥ್. ಸರಸ್ವತಿ ಪಾಟೀಲ್. ಭಾಸ್ಕರ್ ರಾವ್. ಬುದ್ಯಪ್ಪ ಭಂಡಾರಿ. ಸುಮಿತ್ ತಡಕಲ್. ವಿಜಯಕುಮಾರ್. ಗಂಗಣ್ಣ ಡಿಶ್. ಬೀರಪ್ಪ ಸಂಭೂಜಿ. ದೇವೇಂದ್ರ ಗೌಡ. ಹುಸೇನ್ ಭಾಷಾ. ಅಂಬರೀಶ್ ಮೈಲಾಪುರ. ಶಿವು ಎಲ್ಐಸಿ. ಮುರಳಿ ಕೃಷ್ಣ. ಸತೀಶ್ ಇನ್ನು ಅನೇಕರು ಉಪಸ್ಥಿತರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




