——————————-ಸಮರನ್ ರವಿಚಂದ್ರನ್ ದ್ವಿಶತಕ: ಕರುಣ್ ಶತಕ ವಂಚಿತ
ಹುಬ್ಬಳ್ಳಿ: ರಣಜಿ ಕ್ರಿಕೆಟ್ ಪಂದ್ಯಾವಳಿಯ ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡವು ಚಂಧೀಗಢ ವಿರುದ್ಧ ಪಂದ್ಯದ ಎರಡನೇ ದಿನ ಮೂರನೇ ಅವಧಿಯ ಆಟದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, 7 ವಿಕೆಟ್ ಗೆ 525 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ.
ಇಲ್ಲಿನ ಕೆ. ಎಸ್. ಸಿ.ಎ. ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚಂಧೀಗಢ ತಂಡವು ಕರ್ನಾಟಕ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿತ್ತು. ಇದರ ಲಾಭ ಪಡೆದ ಕರ್ನಾಟಕ ತಂಡವು ಬೃಹತ್ ಮೊತ್ತದತ್ತ ನಡೆದಿದೆ. ಕರ್ನಾಟಕತಂಡದ ಪರವಾಗಿ ಸಮರನ್ ರವಿಚಂದ್ರನ್ 221 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಶಿಖರ್ ಶೆಟ್ಟಿ 48 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಕರುಣ್ ನಯ್ಯರ ಶತಕ ವಂಚಿತರಾದರು. ಅವರು 95 ರನ್ ಗಳಿಸಿದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್ 7 ವಿಕೆಟ್ ಗೆ 525
ಸಮರನ್ ರವಿಚಂದ್ರನ್ ಬ್ಯಾಟಿಂಗ್ 221, ಶಿಖರ್ ಶೆಟ್ಟಿ ಬ್ಯಾಟಿಂಗ್ 48
ಕರುಣ್ ನಯ್ಯರ 95, ಜಗಜೀತ್ ಸಿಂಗ್ 70 ಕ್ಕೆ 2), ನಿಶುಂಕ್ ಬಿರ್ಲಾ 147 ಕ್ಕೆ 2)




