ಬೆಂಗಳೂರು : ಕರುನಾಡು ದರೋಡೆ ನಾಡಾಗಿ ಬದಲಾಗಿದೆ. ಹಲ್ಲೆ, ಕೊಲೆ, ಅತ್ಯಾಚಾರ, ಗೋ ಮಾತೆ ಮೇಲಿನ ಕ್ರೌರ್ಯ ದಿನ ದಿನಕ್ಕೂ ಬಿಗಡಾಯಿಸುತ್ತಿದೆ. ಅರಾಜಕತೆಯ ಪರಮಾವಧಿ ಎಲ್ಲೇ ಮೀರಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ
ಭ್ರಷ್ಟ ಸಿದ್ದರಾಮಯ್ಯ ಅವರ ದುರ್ಬಲ ಆಡಳಿತ ಆಕಸ್ಮಿಕ ಗೃಹ ಸಚಿವ ಜಿ.ಪರಮೇಶ್ವರ್ ಅವರ ಅಸಮರ್ಥತೆಯ ಕಾರಣದಿಂದ ಕರ್ನಾಟಕ ಅಯ್ಯಯ್ಯೋ ಅನ್ಯಾಯ ಎಂದು ಕರುನಾಡು ದರೋಡೆ ನಾಡಾಗಿ ಬದಲಾಗಿದೆ. ಹಲ್ಲೆ, ಕೊಲೆ, ಅತ್ಯಾಚಾರ, ಗೋ ಮಾತೆ ಮೇಲಿನ ಕ್ರೌರ್ಯ ದಿನ ದಿನಕ್ಕೂ ಬಿಗಡಾಯಿಸುತ್ತಿದೆ.
ಅರಾಜಕತೆಯ ಪರಮಾವಧಿ ಎಲ್ಲೇ ಮೀರಿದೆ. ಆದರೂ, ದುಷ್ಟ ಸರ್ಕಾರ ನಕಲಿ ಗಾಂಧಿಗಳ ಭವಿಷ್ಯಕ್ಕಾಗಿ ಸಮಾವೇಶ ಮಾಡುತ್ತಾ ಕನ್ನಡಿಗರ ತೆರಿಗೆ ದುಡ್ಡನ್ನು ವೆಚ್ಚ ಮಾಡಿ ಕರ್ನಾಟಕವನ್ನು ದಿವಾಳಿ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.
ಸನ್ಮಾನ್ಯ @khargeಅವರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡದ @INCIndia ಅಂಬೇಡ್ಕರ್ ಅವರನ್ನು ಸೋಲಿಸಿದ ವ್ಯಕ್ತಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದ ಹಿಂದಿನ ರಹಸ್ಯವನ್ನು ಬೆಳಗಾವಿ ಸಮಾವೇಶದಲ್ಲಿ ಬಹಿರಂಗಗೊಳಿಸುತ್ತಿರಾ..??!! ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ಧಾಳಿ ನಡೆಸಿದೆ.




