Ad imageAd image

ಚಿಕ್ಕೋಡಿ ಹಣಬರ ಯಾದವ, ಗೊಲ್ಲ, ಸಮಾಜದ ನೂರು ವರ್ಷಗಳ ಶತಮಾನೋತ್ಸವ ಸಮಾವೇಶ

Bharath Vaibhav
ಚಿಕ್ಕೋಡಿ ಹಣಬರ ಯಾದವ, ಗೊಲ್ಲ, ಸಮಾಜದ ನೂರು ವರ್ಷಗಳ ಶತಮಾನೋತ್ಸವ ಸಮಾವೇಶ
WhatsApp Group Join Now
Telegram Group Join Now

ಚಿಕ್ಕೋಡಿ: ಚಿಕ್ಕೋಡಿ ಹಣಬರ ಯಾದವ್, ಗೊಲ್ಲ, ಸಮಾವೇಶದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನಾಯಕರಾದ ಮಾಜಿ ಎಂ ಎಲ ಸಿ ಶ್ರೀ ಮಹಾಂತೇಶ್ ಕವಟಗಿಮಠ ಹಾಗೂ ರಾಯಬಾಗ ಕ್ಷೇತ್ರದ ಹಾಲಿ ಶಾಸಕರಾದ ದುರ್ಯೋಧನ ಐಹೊಳೆ ಇವರು ಕೂಡ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಮಾವೇಶ ನಮ್ಮ ಚಿಕ್ಕೋಡಿಯಲ್ಲಿ ಇಷ್ಟೊಂದು ಈ ಹಣಬರ, ಯಾದವ್, ಗೊಲ್ಲ, ಜನಸಂಖ್ಯೆ ಇರುವುದು ನಮಗೆ ಆನಂದ ತಂದಿದೆ ಎಂದರು ಹಾಗಾಗಿ ಈ ಸಂಘಟನೆಗೆ ಇನ್ನು ಮುಂದೆ ಮಹತ್ವ ಕೊಡುವುದಾಗಿ ಭರವಸೆ ನೀಡಿದರು.

ಗೋಕಾಕ್ ತಾಲೂಕಿನ ಬಗರನಾಳ ಗ್ರಾಮದ, ಯಮಕನಮರಡಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ಮಂಜುನಾಥ ಪಾಟೀಲ್ ಇವರು ಮಾತನಾಡಿ ನಮ್ಮ ಸಮಾಜಕ್ಕೇ ನೂರು ವರ್ಷಗಳ ಶತಮಾನೋತ್ಸವ ಈ ಸಮಾವೇಶ ನಮ್ಮ ಸಮಾಜವನ್ನು ಇಡೀ ದೇಶದಲ್ಲಿ ಎಬ್ಬಿಸಿ ತೋರಿಸಿದೆ ಇನ್ನು ಮುಂದೆ ನಮ್ಮ ಬೇಡಿಕೆಗಳೆಲ್ಲ ಇಡೆರುತ್ತವೆ ಎಂದರು.

ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಇವರು ಈ ಐತಿಹಾಸಿಕ ಒಂದು ನೂರು ವರ್ಷಗಳ ಶತಮಾನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಈ ಸಮಾಜವನ್ನು ಇಡೀ ದೇಶಕ್ಕೆ ಎತ್ತಿ ತೋರಿಸುವುದು ನಮ್ಮ ಕರ್ತವ್ಯವಾಗಿತ್ತು ಅದರಂತೆ ಈ ಕಾರ್ಯಕ್ರಮ ಸಹಸ್ರಾರು ಸಮಾಜದ ಜನರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು ಇನ್ನು ಮುಂದೆ ಈ ಸಮಾಜ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರೋಶಿಯ ಮುಂಡೆ, ಸಿಂಗಾಯಿ ,ಕರ್ನೂರೆ, ಬಗರನಾಳ ಪಾಟೀಲ, ಹನಬರ ಸಮಾಜದ ಎಲ್ಲ ಯುವಕರು, ಯುವತಿಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!