Ad imageAd image

ಮೊಹರಂ ಮೆರವಣಿಗೆಯಲ್ಲಿ ಕಿರಿಕ್ : 20 ಜನರ ಮೇಲೆ ತಲ್ವಾರನಿಂದ ದಾಳಿ 

Bharath Vaibhav
ಮೊಹರಂ ಮೆರವಣಿಗೆಯಲ್ಲಿ ಕಿರಿಕ್ : 20 ಜನರ ಮೇಲೆ ತಲ್ವಾರನಿಂದ ದಾಳಿ 
CRIME
WhatsApp Group Join Now
Telegram Group Join Now

ಬೆಳಗಾವಿ : ಮೊಹರಂ ಮೆರವಣಿಗೆಯ ಕಿರಿಕ್ ಉಂಟಾಗಿ ಕಿಡಿಗೇಡಿಗಳು ಸುಮಾರು 20 ಜನರ ಮೇಲೆ ತಲ್ವಾರ್‌ ನಿಂದ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ನಗರದ ಕಸಾಯಿ ಗಲ್ಲಿಯಲ್ಲಿ ನಡೆದಿದೆ.

ಘಟನೆಯಲ್ಲಿ ರೆಹಾನ್‌  ಮುಜಾವರ್‌ (16) ಎಂಬ ಬಾಲಕನ ಮೇಲೆ ತೀವ್ರವಾದ ಗಾಯಗಳುಂಟಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ರೆಹಾನ್‌ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಮೊಹರಂ ಮೆರವಣಿಗೆ ಬಳಿಕ ತಲ್ವಾರನಿಂದ ದಾಳಿ ನಡೆಸಲಾಗಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.

ಪೊಲೀಸ್‌ ಆಯುಕ್ತ ಭೂಷಣ ಗುಲಾಬರಾವ್‌ ಬೋರಸೆ ಮತ್ತು ಡಿಸಿಪಿ ನಾರಾಯಣ ಬರಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!