Ad imageAd image

ಜೂನ್ ನಲ್ಲಿಯೇ ಕೆಆರ್‌ಎಸ್ ಜಲಾಶಯ ಭರ್ತಿ : ಇಂದು ಸಿಎಂ – ಡಿಸಿಎಂ ಬಾಗಿನ ಅರ್ಪಣೆ

Bharath Vaibhav
ಜೂನ್ ನಲ್ಲಿಯೇ ಕೆಆರ್‌ಎಸ್ ಜಲಾಶಯ ಭರ್ತಿ : ಇಂದು ಸಿಎಂ – ಡಿಸಿಎಂ ಬಾಗಿನ ಅರ್ಪಣೆ
WhatsApp Group Join Now
Telegram Group Join Now

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ ಜೂನ್ ನಲ್ಲೇ ಭರ್ತಿಯಾಗಿದ್ದು, ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಜೂನ್ ತಿಂಗಳಲ್ಲಿಯೇ ಬಾಗಿನ ಅರ್ಪಿಸಲಿದ್ದಾರೆ.

ಶನಿವಾರವೇ ಕೆ.ಆರ್.ಎಸ್. ಗರಿಷ್ಠಮಟ್ಟ 124.80 ಅಡಿಗೆ ತಲುಪಿದೆ.ಜೂನ್ ನಲ್ಲೇ ಡ್ಯಾಂ ಭರ್ತಿಯಾಗಿದ್ದು, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು ಬಾಗಿನ ಅರ್ಪಿಸಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಕಾವೇರಿ ಪ್ರತಿಮೆಗೆ ಮುಖ್ಯಮಂತ್ರಿ ಸೇರಿ ಗಣ್ಯರಿಂದ ಪೂಜೆ ನಡೆಯಲಿದ್ದು, ಬಳಿಕ ಬಾಗಿನ ಅರ್ಪಿಸಲಾಗುವುದು.

ಇಂದು ಬೆಳಿಗ್ಗೆ 10.30 ರಿಂದ ಕೆಆರ್‌ಎಸ್ ಡ್ಯಾಮ್ ನ ಕಾವೇರಿ ಪ್ರತಿಮೆ ಬಳಿ ಕಾರ್ಯಕ್ರಮ ನಡೆಯಲಿದೆ. ಅಣೆಕಟ್ಟೆಯ 92 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದ್ದು, ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಜಲಾಶಯ ಭರ್ತಿಯಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!