ರಾಯಬಾಗ:ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಶ್ರೀ ಪಂಚಲಿಂಗೇಶ್ವರ ಪುಣ್ಯಕ್ಷೇತ್ರದ ಶ್ರೀ ಪರಮ ಪಾವನ ಮೂರ್ತಿ ಕಾಯಕಯೋಗಿ ವೀರಭದ್ರ ಮಹಾಸ್ವಾಮಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ 38ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ರಾಷ್ಟ್ರಮಟ್ಟದ ಬೃಹತ್ ಕೃಷಿ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.
ಶರಣ ಪರಂಪರೆಯ ಮೌಲ್ಯಗಳನ್ನು ಮೆರೆದು, ಗ್ರಾಮೀಣ ಜೀವನದ ಶ್ರೇಯೋಭಿವೃದ್ಧಿಗೆ ಈ ಉತ್ಸವವು ಸ್ಫೂರ್ತಿದಾಯಕ ವೇದಿಕೆಯಾಗಿರುವ ಹಿನ್ನೆಲೆಯಲ್ಲಿ ಆಯೋಜಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಲ್ಲ ಗ್ರಾಮಸ್ಥರು ಮುಖಂಡರು ಹಾಗೂ ಇನ್ನಿತರೆಲ್ಲರೂ ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ