Ad imageAd image
- Advertisement -  - Advertisement -  - Advertisement - 

ಅಮಿನಗಡದಲ್ಲಿ ಲೇಡಿ ಕಿರಣ್ ಬೇಡಿ ಪಿಎಸ್ಐ ಜ್ಯೋತಿ ವಾಲಿಕಾರ್

Bharath Vaibhav
ಅಮಿನಗಡದಲ್ಲಿ ಲೇಡಿ ಕಿರಣ್ ಬೇಡಿ ಪಿಎಸ್ಐ ಜ್ಯೋತಿ ವಾಲಿಕಾರ್
WhatsApp Group Join Now
Telegram Group Join Now

ಹುನಗುಂದ್:-ತಾಲೂಕಿನ ಅಮೀನಗಡ್ ಪಟ್ಟಣದಲ್ಲಿ
ಪುಂಡರ ಅಟ್ಟಹಾಸಕ್ಕೆ ಬ್ರೆಕ್ ಹಾಕಿದ ಲೇಡಿ ಕಿರಣ ಬೇಡಿ ಎಂದೆ ಜನಮಣ್ಣನೆ ಪಡೆಯುತ್ತಿರುವ PSI ಜ್ಯೋತಿ ವಾಲಿಕಾರ ವಿಜಯಪುರ ನಗರದ ಆದರ್ಶ ಪೊಲೀಸ್ ಠಾಣೆಯಿಂದ ಹುನಗುಂದ ತಾಲೂಕಿನ ಕರದಂಟು ನಗರಿ ಅಮೀನಗಡ ಠಾಣೆಗೆ ಕಾನೂನು ಸುವ್ಯವಸ್ಥೆ ಠಾಣಾ ಅಧಿಕಾರಿಯಾಗಿ ಇತ್ತಿಚ್ಚಿಗೆ ಚಾಜ್೯ ಪಡೆದ ಶ್ರೀಮತಿ ಜ್ಯೋತಿ ಅವರು ಅಮೀನಗಡ ನಗರದ ಸುತ್ತ ಸಾಯಂಕಾಲ ೭:೩೦ ರಿಂದ ರಾತ್ರಿ ೧೧ ಗಂಟೆ ಆದರೂ ರಸ್ತೆ ಪಕ್ಕದಲ್ಲಿ ಗುಂಪು ಗುಂಪಾಗಿ ಕುಳಿತು ಮಧ್ಯಪಾನ ಮಾಡಿ ಎಲ್ಲೆಂದರಲ್ಲಿ ಮಧ್ಯದ ಬಾಡಲಿ,

ಹಾಗೂ ನೀರಿನ ಬಾಟಲ್ ,ಪೌಚ್, ಬಿಸಾಡಿ ಮನೆಯ ಕಬರಿಲ್ಲದೆ ರಸ್ತೆ ಮೇಲೆ ಕುಡಿದು ಗಲಾಟಿ ಮಾಡುವ ಪುಂಡರಿಗೆ ಸಿಂಹ ಸ್ವಷ್ಣವಾಗಿ ಇಂದು ೧೦ಕ್ಕೂ ಹೆಚ್ಚು ಬೈಕ್ ವಶಪಡಿಸಿಕೊಂಡು ಅವರಿಗೆ ಬುದ್ದಿ ಹೇಳಿ ವಾನ್೯ ಮಾಡಿದ ಪ್ರಸಂಗ ಇಂದು ನಡೆಯಿತು.

ಅಮೀನಗಡ ಠಾಣೆಗೆ ಒಳಪಟ್ಟ,ಗೂಡುರು,ಮುರಡಿ,ಗಾನದಾಳ,ಭೀಮನಗಡ,ಇಲಾಳ,ಗ್ರಾಮದಲ್ಲಿ ಓಸಿ,ಮಟಕ ದಂದೆಗಳು ಜೋರಾಗಿ ಕೇಳಿ ಬರುತ್ತಿದ್ದು ಈ ಬಗ್ಗೆ ಜೂಜುಕೋರರ ಹೆಡಿ ಮುರಿ ಕಟ್ಟುವ ಭರವಸೆ ನೀಡಿದ್ದು ಸಮಾಜದಲ್ಲಿ ಅತ್ಯುತ್ತಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ನಗರದಲ್ಲಿ ಅಕ್ರಮ ಮರಳು ಮಾಪಿಯಾ,ಅಕ್ತಮ ,ಮೈನ್ಸ, ಹಾಗೂ ಪ್ರತಿ ವಾರ ಅಮೀನಗಡ ಪಟ್ಟಣದಲ್ಲಿ ನಡೆಯುವ ಕುರಿ,ಧನದ ಸಂತೆ ದಿನ ವಾಹನ ಸವಾರರಿಗೆ ಓಡಾಡಲು ತೊಂದರೆ ಆಗುತ್ತಿದ್ದು ಈ ಬಗ್ಗೆ ಠಾಣಾ ಅಧಿಕಾರಿ ಜ್ಯೋತಿ ಅವರು ಗಮನ ಹರಿಸಿ ಸಂಚಾರಕ್ಕೆ ಅನುಕೂಲ ಮಾಡಲು ಎಷ್ಟರ ಮಟ್ಟಿಗೆ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಒಟ್ಟಾರೆ ಲೆಡಿ ಕಿರಣ ಬೇಡಿ ಎಂದೆ ಸಾರ್ವಜನಿಕ ರಂಗದಲ್ಲಿ ಉತ್ತಮ ಹೆಸರು ಮಾಡುತ್ತಿರುವ ಶ್ರೀಮತಿ ಜ್ಯೋತಿ ವಾಲಿಕಾರ ಅವರು ಹೀಗೆ ನೀರಂತರ ಸೇವೆ ಮಾಡಲೆಂದು ನಮ್ಮ ವಾಹಿನಿಯ ಆಸೆ ಕೂಡ ಆಸಿಸುತ್ತದೆ.

ವರದಿ:- ದಾವಲ್ ಸೇಡಂ

WhatsApp Group Join Now
Telegram Group Join Now
Share This Article
error: Content is protected !!