Ad imageAd image
- Advertisement -  - Advertisement -  - Advertisement - 

ಸಿಂಧನೂರು ನಗರದಲ್ಲಿ ತಡ ರಾತ್ರಿ 6ಕಡೆ ಕಳ್ಳತನ

Bharath Vaibhav
ಸಿಂಧನೂರು ನಗರದಲ್ಲಿ ತಡ ರಾತ್ರಿ 6ಕಡೆ ಕಳ್ಳತನ
WhatsApp Group Join Now
Telegram Group Join Now

ರಾಯಚೂರು; ಜಿಲ್ಲೆ ಸಿಂಧನೂರು ನಗರದಲ್ಲಿ ತಡ ರಾತ್ರಿ 6ಕಡೆ ಕಳ್ಳತನ..ನಾಗರಿಕರಿಗೆ ಹೆಚ್ಚಿದ ಆತಂಕ.
ಸಿಂಧನೂರು ನಗರದ ಮದ್ಯ ಭಾಗದಲ್ಲಿ ಇರುವ ಪಿಕರ್ಡ್ ಬ್ಯಾಂಕ್.ಜೀವನ ಜ್ಯೋತಿ ಪತ್ತಿನ ಸಹಕಾರ ಸಂಘ. ಚಾರ್ಟೆಡ್ ಅಕೌಂಟೆಡ್ . ಕೃಷಿ ಪತ್ತಿನ ಸಹಕಾರ ಸಂಘ. ಗೊಬ್ಬರದ ಗೌಡನ್ . ಬಟ್ಟೆ ಅಂಗಡಿ. ಸೇರಿದಂತೆ 6 ಕಡೆ ಮದ್ಯ ರಾತ್ರಿ 1:50 ರ ಸರಿ ಸುಮಾರು 1ಲಕ್ಷ ಅಧಿಕ ಹಣವನ್ನು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಘಟನಾಸ್ಥಳಕ್ಕೆ ಉಪಾ ವಲಯ ಪೊಲೀಸ್ ಅಧಿಕಾರಿಗಳಾದ Dysp ಬಿ ಎಸ್. ತಳವಾರ ಭೇಟಿಕೊಟ್ಟು ಪರಿಶೀಲಿಸಿ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ ಇತ್ತೀಚಿಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬೈಕ್ ಮತ್ತು ಅಂಗಡಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಜನರು ನೆಮ್ಮದಿಯಿಂದ ರಾತ್ರಿ ನಿದ್ದೆ ಮಾಡಿದಂತಾಗಿದೆ ಇದಕ್ಕೆಲ್ಲ ಕಾರಣ ಆಯಾ ಕಟ್ಟಿನಾ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದೇ ಕಳ್ಳರಿಗೆ ಪ್ಲಸ್ ಪಾಯಿಂಟ್ ಆಗಿದೆ ನಗರ ಮತ್ತು ಗ್ರಾಮೀಣ ಪ್ರದೇಶದ ಕೆಲವು ಭಾಗದ ಸರ್ಕಲ್ ನಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರವಾದವಾಗಿದೆ.


ವರದಿ: ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
Share This Article
error: Content is protected !!